Select Your Language

Notifications

webdunia
webdunia
webdunia
webdunia

ತಂದೆ ಮೇಲಿನ ಧ್ವೇಷಕ್ಕೆ ಮಗನ ಹತ್ಯೆ

ತಂದೆ ಮೇಲಿನ ಧ್ವೇಷಕ್ಕೆ ಮಗನ ಹತ್ಯೆ
ಬೆಂಗಳೂರು , ಶುಕ್ರವಾರ, 12 ಮಾರ್ಚ್ 2021 (10:14 IST)
ಬೆಂಗಳೂರು: ತಂದೆ ಮೇಲಿನ ಮಗನ ಬರ್ಬರವಾಗಿ ಹತ್ಯೆ ಮಾಡಿದ ಹೇಯ ಕೃತ್ಯ ಸಿದ್ಧಾಪುರದಲ್ಲಿ ನಡೆದಿದೆ. ಈ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ.


ಹೊಂಬೇಗೌಡ ನಿವಾಸಿ 20 ವರ್ಷದ ಆಕಾಶ್ ಹತ್ಯೆಗೀಡಾದವ. ರಾತ್ರಿ ಸುಮಾರು 9 ಗಂಟೆ ವೇಳೆಗೆ ಶೌಚಕ್ಕೆ ಹೊರಗೆ ಬಂದಿದ್ದ ಯುವಕ ಆಕಾಶ್ ನನ್ನು ಐದಾರು ಮಂದಿ ಮಾರಕಾಸ್ತ್ರಗಳಿಂದ ಬೆದರಿಸಿ ತಂದೆಯ ಬಗ್ಗೆ ವಿಚಾರಿಸಿದ್ದಾರೆ. ಆಗ ಆಕಾಶ್ ತಂದೆ ಮನೆಯಲ್ಲಿಲ್ಲ ಎಂದಿದ್ದಾನೆ. ಇದರಿಂದ ಕೋಪಗೊಂಡ ದುಷ್ಕರ್ಮಿಗಳು ಆತನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕಾಶ್ ಆಸ್ಪತ್ರೆಗೆ ಸಾಗಿಸುವ ಮಧ‍್ಯದಲ್ಲಿ ಮೃತಪಟ್ಟಿದ್ದಾನೆ. ತಂದೆ ಮೇಲಿನ ಹಳೇ ಧ‍್ವೇಷಕ್ಕೆ ಈ ಹತ್ಯೆ ನಡೆದಿದೆ ಎನ್ನಲಾಗಿದೆ. ಸಂಬಂಧಿಕರೇ ಈ ಹತ್ಯೆಗೆ ಸಂಚು ರೂಪಿಸಿದ್ದರು ಎನ್ನಲಾಗಿದೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಾರಾಷ್ಟ್ರದಲ್ಲಿ ಮತ್ತೆ ಲಾಕ್ ಡೌನ್: ಕರ್ನಾಟಕದಲ್ಲೂ ಕಟ್ಟೆಚ್ಚರ