ಲಕ್ನೋ (ಉತ್ತರ ಪ್ರದೇಶ) [ಭಾರತ]: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಯಾಗ್ರಾಜ್ನಲ್ಲಿ ಮಹಾಕುಂಭದ ಬಗ್ಗೆ "ನಕಾರಾತ್ಮಕ ಪ್ರಚಾರ" ವನ್ನು ಹರಡಿದ್ದಕ್ಕಾಗಿ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು ಮತ್ತು ಅವರು ತಪ್ಪು ಮಾಹಿತಿಯನ್ನು ಹರಡಲು ಪ್ರಯತ್ನಿಸಿದರೂ, ದೇಶದ ಜನರ ನಂಬಿಕೆಯನ್ನು ಅಲುಗಾಡಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.
ಉತ್ತರಪ್ರದೇಶ ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಯೋಗಿ, "ನಕಾರಾತ್ಮಕ ಪ್ರಚಾರ ಮತ್ತು ತಪ್ಪು ಮಾಹಿತಿಯು ದೇಶದ ಜನರ ನಂಬಿಕೆಯ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ನಕಾರಾತ್ಮಕತೆಯನ್ನು ಹರಡುವ ನಿಮ್ಮ ಪ್ರಯತ್ನಗಳು ವಿಫಲವಾಗಿವೆ. ನೀವು (ವಿರೋಧ) ಆಯಕಟ್ಟಿನ ರೀತಿಯಲ್ಲಿ ನಕಾರಾತ್ಮಕತೆಯನ್ನು ಹರಡಲು ಪ್ರಯತ್ನಿಸಿದ್ದೀರಿ, ಆದರೆ ಉತ್ತರ ಪ್ರದೇಶದ ಜನರು ಅಥವಾ ದೇಶದ ಜನರು ನಿಮ್ಮ ಮಾತನ್ನು ಕೇಳಲ್ಲಿ ಎಂದು ಹೇಳಿದರು.
ಇಂತಹ ಭವ್ಯವಾದ ಕಾರ್ಯಕ್ರಮವನ್ನು ಆಯೋಜಿಸುವ ರಾಜ್ಯದ ಸಾಮರ್ಥ್ಯವನ್ನು ಸಾಮೂಹಿಕ ಧಾರ್ಮಿಕ ಸಭೆಯು ಪ್ರದರ್ಶಿಸಿದೆ ಎಂದು ಯುಪಿ ಸಿಎಂ ಹೇಳಿದರು.
ಪ್ರತಿಪಕ್ಷಗಳನ್ನು ಗುರಿಯಾಗಿಸಿ ಮಾತನಾಡಿದ ಸಿಎಂ ಯೋಗಿ, "ಮಹಾಕುಂಭವು ಇಂತಹ ಭವ್ಯವಾದ ಕಾರ್ಯಕ್ರಮವನ್ನು ಆಯೋಜಿಸುವ ರಾಜ್ಯದ ಸಾಮರ್ಥ್ಯವನ್ನು ಪ್ರದರ್ಶಿಸಿದೆ, ಇದು ಕೇವಲ ದೇಶದ ಶಕ್ತಿ ಮಾತ್ರವಲ್ಲದೆ ವಿಶ್ವಕ್ಕೆ ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ. ನೀವು ಹರಡಿದ ನಕಾರಾತ್ಮಕ ಪ್ರಚಾರ ಮತ್ತು ತಪ್ಪು ಮಾಹಿತಿಯು ರಾಷ್ಟ್ರದಾದ್ಯಂತ ಜನರ ನಂಬಿಕೆಯ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ" ಎಂದು ತಿರುಗೇಟು ನೀಡಿದರು.