Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿ ಫಾರಿನ್ ಟೂರ್ ಮುಗಿಸಿ ಯಾವಾಗ ಬರ್ತಾರಪ್ಪಾ... ಕರ್ನಾಟಕ ಶಾಸಕರಿಗೆ ಕಾತುರತೆ ಹೆಚ್ಚಾಯ್ತು

Rahul Gandhi-DK Shivakumar
ಬೆಂಗಳೂರು: ಕರ್ನಾಟಕದಲ್ಲಿ ಡಿಕೆ ಶಿವಕುಮಾರ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿ ಇಷ್ಟು ದಿನಗಳಾದ್ರೂ ಸಚಿವ ಸಂಪುಟ ವಿಸ್ತರಣೆಯಾಗಿಲ್ಲ. ಇದೀಗ ಸಚಿವಾಕಾಂಕ್ಷಿಗಳು ರಾಹುಲ್ ಗಾಂಧಿ ಯಾವಾಗ ಫಾರಿನ್ ಟೂರ್ ಮುಗಿಸಿ ಬರ್ತಾರಪ್ಪಾ ಎಂದು ಕಾತುರದಿಂದ ಕಾಯುತ್ತಿದ್ದಾರೆ.
 

ಡಿಕೆ ಶಿವಕುಮಾರ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿ ಒಂದು ತಿಂಗಳು ಕಳೆದಿದೆ. ಆದರೆ ಇದುವರೆಗೆ ಪ್ರಮುಖ ಇಲಾಖೆಗಳಿಗೇ ಸಚಿವರ ನೇಮಕವಾಗಿಲ್ಲ. ಶಾಲೆ ಶುರುವಾಗಿ ಒಂದು ತಿಂಗಳಾಗಿದ್ದರೂ ಶಿಕ್ಷಣ ಸಚಿವರೇ ಇಲ್ಲ ಎಂದು ವಿಪಕ್ಷಗಳೂ ಲೇವಡಿ ಮಾಡುತ್ತಿವೆ.

ಈ ನಡುವೆ ಡಿಕೆಶಿ ಸಂಪುಟದಲ್ಲಿ ಸಚಿವ ಸ್ಥಾನ ಸಿಗಬಹುದು ಎಂದು ಹಲವರು ಲಾಬಿ ನಡೆಸುತ್ತಿದ್ದಾರೆ. ಆದರೆ ಸದ್ಯಕ್ಕೆ ಕಾಂಗ್ರೆಸ್ ನಾಯಕರು ಯಾವುದನ್ನೂ ತೀರ್ಮಾನಿಸುವ ಸ್ಥಿತಿಯಲ್ಲಿಲ್ಲ. ಇದಕ್ಕೆ ಕಾರಣ ರಾಹುಲ್ ಗಾಂಧಿ ವಿದೇಶ ಪ್ರವಾಸದಲ್ಲಿರುವುದು.

ಕಳೆದ ಕೆಲವು ದಿನಗಳಿಂದ ವಿದೇಶ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಇನ್ನೂ ವಾಪಸ್ ಬಂದಿಲ್ಲ. ನಾಳೆ ಅಥವಾ ನಾಡಿದ್ದು ಅವರು ಭಾರತಕ್ಕೆ ಬಂದಿಳಿಯುವ ನಿರೀಕ್ಷೆಯಿದೆ. ಹೀಗಾಗಿ ಅವರು ಬರುವವರೆಗೂ ಕ್ಯಾಬಿನೆಟ್ ವಿಸ್ತರಣೆ, ಸಚಿವ ಸ್ಥಾನ ಹಂಚಿಕೆ ಕುರಿತು ಯಾವುದೇ ತೀರ್ಮಾನವಾಗಲ್ಲ. ಇದಕ್ಕಾಗಿ ಈಗ ಕಾಂಗ್ರೆಸ್ ಸಚಿವಾಕಾಂಕ್ಷಿಗಳು ರಾಹುಲ್ ಯಾವಾಗ ಬರ್ತಾರಪ್ಪಾ ಎಂದು ಕಾದು ಕುಳಿತಿದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಯಿಗೆ ಯಾಕ್ರೀ ಹೊಡೆದ್ರಿ ಎಂದು ಹೀರೋ ಆಗಲು ಹೊರಟ: ಕೊನೆಗೆ ಆತನಿಗೇ ನಾಯಿ ಮಾಡಿದ್ದು ನೋಡಿದ್ರೆ ಏನನ್ನಬೇಕು ನೀವೇ ಹೇಳಿ video