Publish Date: Sat, 06 Jun 2020 (11:14 IST)
Updated Date: Sat, 06 Jun 2020 (11:16 IST)
ನವದೆಹಲಿ: ಇತ್ತೀಚೆಗಷ್ಟೇ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಈಗ ಬಿಜೆಪಿಯಿಂದಲೂ ಹೊರ ನಡೆಯಲು ಹೊರಟಿದ್ದಾರಾ? ಇಂತಹದ್ದೊಂದು ಅನುಮಾನ ಮೂಡಿದೆ.
ಯಾಕೆಂದರೆ ಜ್ಯೋತಿರಾಧಿತ್ಯ ತಮ್ಮ ಟ್ವಿಟರ್ ಪೇಜ್ ನಲ್ಲಿ ಇದುವರೆಗೆ ಬಿಜೆಪಿ ನಾಯಕ ಎಂದು ಬರೆದುಕೊಂಡಿದ್ದರು. ಆದರೆ ಇದೀಗ ಇದ್ದಕ್ಕಿದ್ದಂತೆ ಬಿಜೆಪಿ ಹೆಸರನ್ನು ಅಳಿಸಿ ಹಾಕಿದ್ದಾರೆ. ಈ ಹಿಂದೆ ಕಾಂಗ್ರೆಸ್ ಬಿಡುವ ಮುನ್ನವೂ ಅವರು ಇದೇ ರೀತಿ ಪಕ್ಷದ ಹೆಸರು ಅಳಿಸಿ ಹಾಕಿದ್ದರು. ಹೀಗಾಗಿ ಈಗಲೂ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯ ಮೂಡಿ ಪಕ್ಷದಿಂದ ಹೊರನಡೆಯಲು ಸಿದ್ಧತೆ ನಡೆಸಿದ್ದಾರಾ ಎಂಬ ಅನುಮಾನ ಹರಡಿದೆ.
ಆದರೆ ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಜ್ಯೋತಿರಾದಿತ್ಯ ಸಿಂಧಿಯಾ ಅಂತಹ ಯಾವುದೇ ಉದ್ದೇಶವೂ ಇಲ್ಲ, ಬಿಜೆಪಿ ಜತೆಗೆ ತನಗೆ ಯಾವುದೇ ಸಮಸ್ಯೆಯಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.