Select Your Language

Notifications

webdunia
webdunia
webdunia
webdunia

ಮುಖೇಶ್ ಅಂಬಾನಿಗೆ ಬೆದರಿಕೆ ಪ್ರಕರಣಕ್ಕೆ ಟ್ವಿಸ್ಟ್

ಮುಖೇಶ್ ಅಂಬಾನಿಗೆ ಬೆದರಿಕೆ ಪ್ರಕರಣಕ್ಕೆ ಟ್ವಿಸ್ಟ್
ಮುಂಬೈ , ಸೋಮವಾರ, 1 ಮಾರ್ಚ್ 2021 (10:30 IST)
ಮುಂಬೈ: ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ನಿವಾಸದ ಬಳಿ ಸ್ಪೋಟಕ ತುಂಬಿದ ಕಾರು ನಿಲುಗಡೆ ಮಾಡಿದ್ದು ತಮ್ಮ ಸಂಘಟನೆಯವರೇ ಎಂದು ಜೈಷ್ ಉಲ್ ಉಗ್ರರು ಟೆಲಿಗ್ರಾಂ ಆಪ್ ನಲ್ಲಿ ಸಂದೇಶ ರವಾನಿಸಿದ್ದು ನಿನ್ನೆ ಸುದ್ದಿಯಾಗಿತ್ತು. ಆದರೆ ಇಂದು ಆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.


ಅಂಬಾನಿ ನಿವಾಸದಲ್ಲಿ ಜಿಲೆಟಿನ್ ಸ್ಪೋಟಕ ತುಂಬಿದ ವಾಹನ ನಿಲುಗಡೆ ಮಾಡಿದ ಬೆದರಿಕೆ ಹಾಕಿದ್ದು ಜೈಷ್ ಸಂಘಟನೆಯಲ್ಲ ಎಂದು ಜೈಷ್ ಸಂಘಟನೆಯೇ ಹೇಳಿಕೆ ಬಿಡುಗಡೆ ಮಾಡಿದೆ. ಭಾರತೀಯ ಮಾಧ‍್ಯಮದಲ್ಲಿ ಪ್ರಕಟವಾಗಿರುವಂತೆ ನಾವು ಈ ಕೃತ್ಯವೆಸಗಿಲ್ಲ. ನಮ್ಮ ಹೆಸರಿನಲ್ಲಿ ಯಾಕೋ ನಕಲಿ ಸಂದೇಶ ಕಳುಹಿಸಿದ್ದಾರೆ ಎಂದು ಜೈಷ್ ಹೇಳಿಕೆ ಬಿಡುಗಡೆ ಮಾಡಿದೆ. ಇದೀಗ ಪೊಲೀಸರು ಮತ್ತಷ್ಟು ವಿಚಾರಣೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಫೇಸ್ ಬುಕ್ ನಲ್ಲಿ ವಿಡಿಯೋ ಮಾಡಿ ಜೀವಕೊನೆಗಾಣಿಸಿದ ಯುವಕ