Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ರಿಯಾಲಿಟಿ ಶೋ ಸ್ಟಾರ್ ತಾಪಸ್ಯ ರಜತ್ ರಿಂದ ಅಂಗಡಿಯಲ್ಲಿ ರಂಪಾಟ

webdunia
ಸೋಮವಾರ, 1 ಮಾರ್ಚ್ 2021 (09:38 IST)
ಬೆಂಗಳೂರು: ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಮೂಲಕ ಜನಪ್ರಿಯರಾಗಿದ್ದ ರಜತ್ ಕಿಶನ್ ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಅಂಗಡಿಯೊಂದರ ಮಾಲಿಕರ ಜೊತೆ ಕಿತ್ತಾಟ ನಡೆಸಿದ ಘಟನೆ ವರದಿಯಾಗಿದೆ.


ಈ ಸಂಬಂಧ ಬಸವೇಶ್ವರ ನಗರದ ಅಂಗಡಿ ಮಾಲಿಕ ಕಿರಣ್ ರಾಜ್ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ. ರಜತ್ ತಮ್ಮ ಅಂಗಡಿ ಮುಂದೆಯೇ ಕಾರು ಪಾರ್ಕ್ ಮಾಡಿದ್ದರು. ಇದರಿಂದ ತಮಗೆ ವ್ಯಾಪಾರಕ್ಕೆ ತೊಂದರೆಯಾಗುತ್ತದೆಂದು ಬೇರೆಡೆ ಪಾರ್ಕ್ ಮಾಡುವಂತೆ ಕಿರಣ್ ಹೇಳಿದ್ದಾರೆ. ಈ ವೇಳೆ ಐದು ನಿಮಿಷದಲ್ಲಿ ಕಾರು ತೆಗೆಯವುದಾಗಿ ಹೇಳಿದ ರಜತ್ ಅರ್ಧಗಂಟೆಯಾದರೂ ತೆಗೆಯಲಿಲ್ಲ. ಆಗ ಮತ್ತೆ ಕಿರಣ್ ಕಾರು ತೆಗೆಯಲು ಹೇಳಿದ್ದಾರೆ. ಆಗ ಆಕ್ರೋಶಗೊಂಡ ರಜತ್ ರಂಪಾಟ ನಡೆಸಿದ್ದಾರೆ. ಅಂಗಡಿಯ ವಸ್ತುಗಳಿಗೆ ಹಾನಿ ಮಾಡಿದ್ದಲ್ಲದೆ, ಮಾಲಿಕ ಕಿರಣ್, ಆತನ ಸಹಾಯಕ್ಕೆ ಬಂದ ಪೋಷಕರ ಮೇಲೂ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಇದೀಗ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಗೆಳೆಯನಿಗೆ ಸಹಾಯ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಯುವಕ