Publish Date: Sat, 18 Nov 2017 (09:45 IST)
Updated Date: Sat, 18 Nov 2017 (09:49 IST)
ಚೆನ್ನೈ: ಜಯಲಲಿತಾ ನಿವಾಸಕ್ಕೆ ರಾತ್ರೋ ರಾತ್ರಿ ದಾಳಿ ನಡೆಸಿದ ಐಟಿ ಅಧಿಕಾರಿಗಳು ಮಾಜಿ ಸಿಎಂರ ಕೊಠಡಿಗೆ ಕಾಲಿಡಲೂ ಇಲ್ಲ. ಯಾಕೆ ಗೊತ್ತಾ?
ಜಯಲಲಿತಾ ನಿವಾಸದಲ್ಲಿಡೀ ತಪಾಸಣೆ ಮಾಡಿದ ಅಧಿಕಾರಿಗಳು ಬೆಡ್ ರೂಂಗೆ ಹೋಗಿ ತಪಾಸಣೆ ಮಾಡುವ ಸಾಹಸ ಮಾಡಲಿಲ್ಲ. ಇದಕ್ಕೆ ನಾವು ಅವಕಾಶ ಕೊಡಲಿಲ್ಲ ಎಂದು ಜಯಲಲಿತಾ ಸಂಬಂಧಿ, ಜಯಾ ಟಿವಿ ವ್ಯವಸ್ಥಾಪಕ ವಿವೇಕ್ ಜಯರಾಂ ಸ್ಪಷ್ಟಪಡಿಸಿದ್ದಾರೆ.
ಜಯಲಲಿತಾ ಕೊಠಡಿಯನ್ನು ನಾವು ದೇವಸ್ಥಾನದಂತೆ ಪರಿಗಣಿಸಿದ್ದೇವೆ. ಅಷ್ಟು ಪಾವಿತ್ರ್ಯತೆಯಿಂದ ಸಂರಕ್ಷಿಸಿದ್ದೇವೆ. ಆ ಕೊಠಡಿಯನ್ನು ಯಾವ ಕಾರಣಕ್ಕೂ ತಪಾಸಣೆ ಮಾಡಬೇಡಿ ಎಂದು ಮನವಿ ಮಾಡಿದ್ದೆವು ಎಂದು ವಿವೇಕ್ ಹೇಳಿದ್ದಾರೆ. ಅದರಂತೆ ಐಟಿ ಅಧಿಕಾರಿಗಳು ಕೂಡಾ ಆ ಕೊಠಡಿಗೆ ಕಾಲಿಡುವ ಸಾಹಸ ಮಾಡಿಲ್ಲವಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ