Select Your Language

Notifications

webdunia
webdunia
webdunia
webdunia

ಮಾವಿನ ಗೊರಟೆ ಎಸೆದದ್ದೇ ತಪ್ಪಾಯ್ತ? ಸಹಪಾಠಿ ಚಾಕುವಿನಿಂದ ಬಾಲಕ!

ಮಾವಿನ ಗೊರಟೆ ಎಸೆದದ್ದೇ ತಪ್ಪಾಯ್ತ?  ಸಹಪಾಠಿ ಚಾಕುವಿನಿಂದ ಬಾಲಕ!
ಚೆನ್ನೈ , ಬುಧವಾರ, 18 ಮೇ 2022 (08:47 IST)
ಚೆನ್ನೈ : ಮಾವಿನ ಗೊರಟೆಯನ್ನು ಶಾಲೆಯಲ್ಲಿ ಎಸೆದಿದ್ದರಿಂದ ಸಿಟ್ಟಿಗೆದ್ದ ಆತನ ಸಹಪಾಠಿಯೇ ಚಾಕುವಿನಿಂದ ಬಾಲಕನನ್ನು ಇರಿದ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಕಾವೇರಿಪಟ್ಟಣಂ ಬಳಿಯ ಶಾಲೆಯೊಳಗೆ ನಡೆದಿದೆ.

ಬನ್ನಿಹಳ್ಳಿ ಗ್ರಾಮದ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಬಾಲಕನೊಬ್ಬ ತನ್ನ ಸ್ನೇಹಿತನೊಂದಿಗೆ ಆಟವಾಡುತ್ತಿದ್ದ. ಆ ಸಂದರ್ಭದಲ್ಲ್ಲಿ ಆತ ಮಾವಿನ ಗೊರಟೆಯನ್ನು ಎಸೆದಿದ್ದಾನೆ.

ಇದರಿಂದಾಗಿ ಆತನಿಗೆ ಹಾಗೂ ಬಾಲಕನ ಸಹಪಾಠಿಯ ನಡುವೆ ಜಗಳ ಪ್ರಾರಂಭವಾಗಿದೆ. ಗೊರಟೆ ಎಸದಿದ್ದ ಬಾಲಕನಿಗೆ ಸಹಪಾಠಿಗಳು ಬೆದರಿಕೆಯನ್ನು ಹಾಕಿದ್ದಾರೆ.

ಆದರೂ ನಿಲ್ಲದ ಜಗಳ ವಿಕೋಪಕ್ಕೆ ಹೋಗಿ ಆತನ ಸಹಪಾಠಿಯೊಬ್ಬ ತನ್ನ ಜೇಬಿನಲ್ಲಿದ್ದ ಚಾಕುವನ್ನು ತೆಗೆದು ಆ ಬಾಲಕನಿಗೆ ಇರಿದಿದ್ದಾನೆ. ಇದಾದ ಬಳಿಕ ಚಾಕು ಇರಿದವರೆಲ್ಲರೂ ಭಯ ಭೀತರರಾಗಿ ಓಡಿ ಹೋಗಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ಗುಡುಗು ಸಹಿತ ಭಾರೀ ಮಳೆಗೆ ಸಿಲಿಕಾನ್ ಸಿಟಿ ತತ್ತರ!