Select Your Language

Notifications

webdunia
webdunia
webdunia
webdunia

ಚೆನ್ನೈ ತಂಡದ ಮೇಲೆ ರವೀಂದ್ರ ಜಡೇಜಾ ಮುನಿಸು: ನಾಯಕತ್ವದಿಂದ ಕಿತ್ತು ಹಾಕಿದ್ದಕ್ಕೆ ಸಿಟ್ಟು?

ಚೆನ್ನೈ ತಂಡದ ಮೇಲೆ ರವೀಂದ್ರ ಜಡೇಜಾ ಮುನಿಸು: ನಾಯಕತ್ವದಿಂದ ಕಿತ್ತು ಹಾಕಿದ್ದಕ್ಕೆ ಸಿಟ್ಟು?
ಮುಂಬೈ , ಗುರುವಾರ, 12 ಮೇ 2022 (17:21 IST)
ಮುಂಬೈ: ಧೋನಿ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದ ರವೀಂದ್ರ ಜಡೇಜಾಗೆ ಯಾಕೋ ಯಶಸ್ಸು ಸಿಗಲಿಲ್ಲ. ಇದರ ಬೆನ್ನಲ್ಲೇ ಮತ್ತೆ ಧೋನಿಯೇ ತಂಡದ ನಾಯಕರಾದರು.

ಆದರೆ ಈಗ ಜಡೇಜಾ ಗಾಯದ ನೆಪದಿಂದ ಐಪಿಎಲ್ ನಿಂದ ಹೊರಬಿದ್ದಿದ್ದಾರೆ. ಆದರೆ ಐಪಿಎಲ್ ನಿಂದ ಹೊರನಡೆದ ಬೆನ್ನಲ್ಲೇ ಜಡೇಜಾ ಸಿಎಸ್ ಕೆ ತಂಡದ ಮೇಲೆ ಮುನಿಸಿಕೊಂಡಿದ್ದಾರೆ ಎಂಬ ವರದಿಗಳಾಗಿವೆ.

ಜಡೇಜಾ ನಾಯಕತ್ವದಲ್ಲಿ ವಿಫಲರಾದ ಕಾರಣ ತಾವಾಗಿಯೇ ಧೋನಿಗೆ ಮತ್ತೆ ನಾಯಕತ್ವ ಬಿಟ್ಟುಕೊಟ್ಟರು ಎಂದು ಚೆನ್ನೈ ತಂಡ  ಈ ಮೊದಲು ಟ್ವೀಟ್ ಮಾಡಿತ್ತು. ಆದರೆ ಅಸಲಿಗೆ ಜಡೇಜಾರಿಂದ ನಾಯಕತ್ವ ಕಿತ್ತುಕೊಳ್ಳಲಾಗಿತ್ತು. ಇದೇ ಸಿಟ್ಟಿನಲ್ಲಿ ಅವರು ಗಾಯದ ನೆಪದಿಂದ ತಂಡದಿಂದ ಹೊರನಡೆದಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಚೆನ್ನೈ ಫ‍್ರಾಂಚೈಸಿ ತನ್ನ ಇನ್ ಸ್ಟಾಗ್ರಾಂ ಪುಟದಲ್ಲಿ ಜಡೇಜಾರನ್ನು ಅನ್ ಫಾಲೋ ಮಾಡಿರುವುದು ಅನುಮಾನ ಹೆಚ್ಚಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್‌ ಕೊಹ್ಲಿ ಫಾರ್ಮ್‌ ಗೆ ಮರಳಲಿ ಎಂದು ಪ್ರಾರ್ಥಿಸುವೆ: ಪಾಕಿಸ್ತಾನದ ವೇಗಿ ರಿಜ್ವಾನ್!‌