Select Your Language

Notifications

webdunia
webdunia
webdunia
webdunia

Indore Couple murder: ಮದುವೆ ಇಷ್ಟ ಇಲ್ಲ ಅಂದ್ರೆ ಆಗ್ಬೇಡಿ, ಮರ್ಡರ್ ಯಾಕೆ ಮಾಡ್ತೀರಿ

Indore murder

Krishnaveni K

ಇಂಧೋರ್ , ಸೋಮವಾರ, 9 ಜೂನ್ 2025 (11:08 IST)
Photo Credit: X
ಇಂಧೋರ್: ಮದುವೆ ಇಷ್ಟ ಅಲ್ಲ ಅಂದ್ರೆ ಆಗ್ಬೇಡಿ, ಮರ್ಡರ್ ಮಾಡಿ ಯಾರದ್ದೋ ಮಕ್ಕಳ ಜೀವ, ಜೀವನ ಯಾಕೆ ಕಸಿದುಕೊಳ್ತೀರಿ? ಇಂಧೋರ್ ನಲ್ಲಿ ಹನಿಮೂನ್ ಗೆ ಕರೆದೊಯ್ದು ಪತಿಯನ್ನು ಪತ್ನಿಯೇ ಮರ್ಡರ್ ಮಾಡಿದ ಪ್ರಕರಣದ ಬಗ್ಗೆ ಸಾರ್ವಜನಿಕರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಇಂಧೋರ್ ನ ರಾಜ ರಘುವಂಶಿ ಜೊತೆ ಸೋನಮ್ ಗೆ ಮೇ 10 ರಂದು ಮದುವೆಯಾಗಿತ್ತು. ಮದುವೆಯಲ್ಲಿ ನಗು  ನಗುತ್ತಾ ಪತಿ ಜೊತೆ ಸೋನಮ್ ಫೋಟೋಗಳಿಗೆ ಪೋಸ್ ಕೊಟ್ಟಿದ್ದರು. ಆಗ ಯಾರೂ ಈಕೆಗೆ ಗಂಡನ ಮೇಲೆ ಅಷ್ಟು ಧ್ವೇಷವಿತ್ತು ಎಂದು ಹೇಳುವಂತೆಯೇ ಇರಲಿಲ್ಲ.

ಆದರೆ ಮೇ 22 ಕ್ಕೆ ಹನಿಮೂನ್ ಗೆ ಹೋದ ಇಬ್ಬರೂ ಬೈಕ್ ರೈಡ್ ಗೆ ತೆರಳಿದ್ದರು. ಜೂನ್ 2 ರಂದು ರಘುವಂಶಿ ಮೃತದೇಹ ಪತ್ತೆಯಾಗಿತ್ತು. ಇದಾದ ಬಳಿಕ ಪತ್ನಿ ನಾಪತ್ತೆಯಾಗಿದ್ದಳು. ಪತಿ ಜೊತೆ ಬೈಕ್ ರೈಡ್ ಗೆ ತೆರಳುವ ಮುನ್ನ ಸೋನಮ್ ಫೋನ್ ನಲ್ಲಿ ಮಾತನಾಡುತ್ತಿರುವ ದೃಶ್ಯಗಳೂ ವೈರಲ್ ಆಗಿತ್ತು. ಹೀಗಾಗಿ ಸೋನಮ್ ತಮ್ಮ ಲೊಕೇಷನ್ ಬಗ್ಗೆ ಗೂಂಡಾಗಳಿಗೆ ಮಾಹಿತಿ ನೀಡಿರಬಹುದು ಎನ್ನಲಾಗಿದೆ.

ಈ ಘಟನೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇಷ್ಟವಿಲ್ಲದ ಮೇಲೆ ಮದುವೆ ಯಾಕೆ ಆಗ್ತೀರಿ? ಒಂದು ವೇಳೆ ಮದುವೆಯಾದ ಮೇಲೆ ಇಷ್ಟವಾಗ್ತಿಲ್ಲ ಎಂದರೆ ಡಿವೋರ್ಸ್ ಪಡೆದುಕೊಳ್ಳಬಹುದು. ಅದು ಬಿಟ್ಟು ಕೊಲೆ ಮಾಡಿ ಇನ್ನೊಂದು ಜೀವ ತೆಗೆದು ನಿಮ್ಮ ಜೀವನವನ್ನೂ ಯಾಕೆ ಹಾಳು ಮಾಡ್ತೀರಿ? ಗಂಡನನ್ನೇ ಕೊಲ್ಲುವ ಹೆಂಡತಿ ಎಂದರೆ ನಾವು ಎಂಥಾ ಸಮಾಜದಲ್ಲಿ ಇದ್ದೇವೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Gold price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ