Publish Date: Tue, 05 Apr 2022 (09:30 IST)
Updated Date: Tue, 05 Apr 2022 (09:32 IST)
ತಿರುವನಂತಪುರಂ: ಮೊಬೈಲ್ ಫೋನ್ ಬಳಕೆ ವಿಚಾರಕ್ಕೆ ಪತಿ-ಪತ್ನಿ ನಡುವೆ ಜಗಳವಾಗಿ ಕೊನೆಗೆ ಪತಿ ಪತ್ನಿಯ ಮೇಲೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಕೇರಳದಲ್ಲಿ ನಡೆದಿದೆ.
ಇದೀಗ ಆರೋಪಿ ಪತಿ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ. ಆರೋಪಿ ಫಕ್ರುದ್ದೀನ್ ಮತ್ತು ಪತ್ನಿ ಅಸ್ಸಾಂ ನಡುವೆ ಮೊಬೈಲ್ ಬಳಕೆ ವಿಚಾರಕ್ಕೆ ಭಿನ್ನಾಭಿಪ್ರಾಯವಾಗಿತ್ತು.
ಮೊಬೈಲ್ ಬಳಸದಂತೆ ಪತಿ ನಿರ್ಬಂಧಿಸಿದಾಗ ಇಬ್ಬರ ನಡುವೆ ಜಗಳವಾಗಿತ್ತು. ಇದೇ ಸಿಟ್ಟಿನಲ್ಲಿ ಪತ್ನಿ ಕೊಲೆ ಮಾಡಿದ ಪತಿ ಬಂಧನ ಭೀತಿಯಲ್ಲಿ ತಲೆಮರೆಸಿಕೊಂಡಿದ್ದಾನೆ.