Select Your Language

Notifications

webdunia
webdunia
webdunia
webdunia

ಪತ್ನಿ ವಿಚ್ಛೇದನ ನೋಟಿಸ್ ನೀಡಿದ್ದಕ್ಕೆ ಸಿಟ್ಟಿಗೆದ್ದ ಪತಿ ಮಾಡಿದ್ದೇನು?

ಪತ್ನಿ ವಿಚ್ಛೇದನ ನೋಟಿಸ್ ನೀಡಿದ್ದಕ್ಕೆ ಸಿಟ್ಟಿಗೆದ್ದ ಪತಿ ಮಾಡಿದ್ದೇನು?
ಕೊಯಮತ್ತೂರು , ಶುಕ್ರವಾರ, 16 ನವೆಂಬರ್ 2018 (08:41 IST)
ಕೊಯಮತ್ತೂರು: ಮನೆಗೆ ಮರಳು ಎಂದರೂ ಕೇಳದೇ ವಿಚ್ಛೇದನ ನೋಟಿಸ್ ನೀಡಿದ್ದಕ್ಕೆ ಸಿಟ್ಟಿಗೆದ್ದ ಪತಿ ಪತ್ನಿ ಮತ್ತು ಆಕೆಯ ತಾಯಿಯನ್ನೇ ಕೊಲೆ ಮಾಡಿ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಕೊಯಮತ್ತೂರಿನ ಪೊಲ್ಲಾಚಿಯಲ್ಲಿ ನಡೆದಿದೆ.

ಬಾಬು(42) ಎಂಬಾತ ಕೊಲೆ ಆರೋಪಿ. ಈತ ತನ್ನ ಪತ್ನಿ ಸುಮತಿ (36) ಹಾಗೂ ಅತ್ತೆ ವಿಶಾಲಾಕ್ಷಿ (56) ಯನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇಬ್ಬರಿಗೂ ಮದುವೆಯಾಗಿ 15 ವರ್ಷಗಳಾಗಿದ್ದರೂ ಮಕ್ಕಳಿರಲಿಲ್ಲ. ಕಳೆದ ಎರಡು ವರ್ಷಗಳಿಂದ ಪತ್ನಿ ಸುಮತಿ ತವರು ಮನೆಯಲ್ಲಿದ್ದಳು. ಮನೆಗೆ ಮರಳುವಂತೆ ಪತಿ ಬಾಬು ಒತ್ತಾಯಿಸಿದರೂ ಕೇಳದೇ ಕೆಲವು ದಿನಗಳ ಹಿಂದಷ್ಟೇ ವಿಚ್ಛೇದನ ನೋಟಿಸ್ ಕಳುಹಿಸಿದ್ದಳು. ಇದರಿಂದ ಸಿಟ್ಟಿಗೆದ್ದ ಬಾಬು ಪತ್ನಿಯ ತವರು ಮನೆಗೇ ಹೋಗಿ ಈ ಕೃತ್ಯವೆಸಗಿದ್ದಾನೆ. ನಂತರ ಅದೇ ಮನೆಯಲ್ಲಿ ತಾನೂ ನೇಣಿಗೆ ಶರಣಾಗಿದ್ದಾನೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಏಕತಾ ಪ್ರತಿಮೆ ಆಯ್ತು, ಇದೀಗ ಕೆಆರ್ ಎಸ್ ನಲ್ಲಿ ತಲೆಯೆತ್ತಲಿದೆ ಕಾವೇರಿ ಪ್ರತಿಮೆ