Select Your Language

Notifications

webdunia
webdunia
webdunia
webdunia

ಕೊಳಚೆ ನೀರಿನಲ್ಲಿ ಕೊತ್ತಂಬರಿ ಸೊಪ್ಪು ತೊಳೆದವನ ವಿರುದ್ಧ ಕೇಸ್!

ಕೊಳಚೆ ನೀರಿನಲ್ಲಿ ಕೊತ್ತಂಬರಿ ಸೊಪ್ಪು ತೊಳೆದವನ ವಿರುದ್ಧ ಕೇಸ್!
ಭೋಪಾಲ್ , ಗುರುವಾರ, 28 ಅಕ್ಟೋಬರ್ 2021 (08:55 IST)
ಭೋಪಾಲ್: ಕೊಳಚೆ ನೀರಿನಲ್ಲಿ ಕೊತ್ತಂಬರಿ ಸೊಪ್ಪು ತೊಳೆದು ಮಾರಾಟ ಮಾಡುತ್ತಿದ್ದ ಭೋಪಾಲ್ ನ ವ್ಯಾಪಾರಿ ವಿರುದ್ಧ ಪ್ರಕರಣ ದಾಖಲಾಗಿದೆ.

ತರಕಾರಿ ವ್ಯಾಪಾರಿಯೊಬ್ಬ ಕೊಳಚೆ ನೀರಿನಲ್ಲಿ ಕೊತ್ತಂಬರಿ ಸೊಪ್ಪು ತೊಳೆಯುತ್ತಿದ್ದ ದೃಶ್ಯವನ್ನು ಸ್ಥಳೀಯರೊಬ್ಬರು ಸೆರೆ ಹಿಡಿದಿದ್ದರು. ವಿಡಿಯೋ ಮಾಡುತ್ತಿದ್ದ ವ್ಯಕ್ತಿ ಈ ರೀತಿ ಮಾಡಬೇಡಿ ಎಂದರೂ ವ್ಯಾಪಾರಿ ಕ್ಯಾರೇ ಎಂದಿರಲಿಲ್ಲ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭೋಪಾಲ್ ನಗರಾಡಳಿತದ ಗಮನಕ್ಕೆ ಬಂದಿದೆ. ಈ ಸಂಬಂಧ ನಗರಾಡಳಿತ ಪೊಲೀಸರಿಗೆ ವ್ಯಾಪಾರಿ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿತ್ತು. ಅದರಂತೆ ಆತನ ವಿರುದ್ಧ ಎಫ್ ಐಆರ್ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕದಲ್ಲಿ ಹೊಸ ತಳಿಯ ಕೊವಿಡ್ ಪ್ರಕರಣ ಪತ್ತೆ!