Select Your Language

Notifications

webdunia
webdunia
webdunia
webdunia

ಹಬ್ಬಕ್ಕೆ ಬಂದು ಮಕ್ಕಳ ಪ್ರಾಣ ತೆಗೆದ ತಂದೆ!

ಹಬ್ಬಕ್ಕೆ ಬಂದು ಮಕ್ಕಳ ಪ್ರಾಣ ತೆಗೆದ ತಂದೆ!
ಹೈದರಾಬಾದ್ , ಬುಧವಾರ, 12 ಜನವರಿ 2022 (15:36 IST)
ಹೈದರಾಬಾದ್ : ಪತ್ನಿಯೊಂದಿಗೆ ಜಗಳವಾಡಿ ಇಬ್ಬರು ಮಕ್ಕಳನ್ನು ಬಾವಿಗೆ ಎಸೆದು, ಸಿಐಎಸ್ಎಫ್ ಪೇದೆ ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಬೂಬಾಬಾದ್ ಜಿಲ್ಲೆಯ ಗಾಡಿಗುಡೆಮ್ ತಾಂಡಾದಲ್ಲಿ ನಡೆದಿದೆ.

ಭುಕ್ಯ ರಾಮ್ ಕುಮಾರ್ ಮೃತ ಸಿಐಎಸ್ಎಫ್ ಕಾನ್ಸ್ಟೆಬಲ್. ಈತ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದನು. ಸಂಕ್ರಾಂತಿ ಹಬ್ಬವನ್ನು ಕುಟುಂಬ ಸಮೇತ ಆಚರಿಸಲು ಗಡಿಗುಡೆಂ ತಾಂಡಾದ ಮನೆಗೆ ಬಂದಿದ್ದನು.

ಈ ವೇಳೆ ಫೈನಾನ್ಸ್ ಕಂಪನಿಯೊಂದರಲ್ಲಿ ಅಡಮಾನವಿಟ್ಟಿದ್ದ ಚಿನ್ನಾಭರಣಕ್ಕೆ ಸಂಬಂಧಿಸಿದಂತೆ ಪತ್ನಿಯೊಂದಿಗೆ ಜಗಳ ಮಾಡಿದ್ದಾನೆ. ಹೀಗೆ ಕೆಲವು ವಿಚಾರಗಳ ಕುರಿತಾಗಿ ದಂಪತಿ  ನಡುವೆ ಮನಸ್ಥಾಪ ಇತ್ತು. ಮನನೊಂದ ರಾಮ್ ಕುಮಾರ್ ತನ್ನ ಮಕ್ಕಳನ್ನು ಮನೆಯಿಂದ ಹೊರಗೆ ಕರೆದೊಯ್ದಿದ್ದಾನೆ.

ಇಬ್ಬರ ಪ್ರಾಣವನ್ನು ತೆಗೆದು ಮೃತ ದೇಹಗಳನ್ನು ಬಾವಿಗೆ ಎಸೆದು ಗ್ರಾಮಸ್ಥರಿಗೆ ಈ ವಿಚಾರವನ್ನು ತಿಳಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ.


Share this Story:

Follow Webdunia kannada

ಮುಂದಿನ ಸುದ್ದಿ

ಮೆಟ್ರೋ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ