Select Your Language

Notifications

webdunia
webdunia
webdunia
webdunia

ಮೊಬೈಲ್ ರಿಪೇರಿ ಮಾಡಿಸಲಾಗದ ದುಃಖದಲ್ಲಿ ಆತ್ಮಹತ್ಯೆ ಮಾಡಿಕೊಂಡ!

ಮೊಬೈಲ್ ರಿಪೇರಿ ಮಾಡಿಸಲಾಗದ ದುಃಖದಲ್ಲಿ ಆತ್ಮಹತ್ಯೆ ಮಾಡಿಕೊಂಡ!
ಮೈಸೂರು , ಭಾನುವಾರ, 9 ಜನವರಿ 2022 (09:58 IST)
ಮೈಸೂರು: ಜನ ಎಂತೆಂಥಾ ಕ್ಷುಲ್ಲುಕ ಕಾರಣಕ್ಕೆ ಜೀವವನ್ನೇ ಕಳೆದುಕೊಳ್ಳುವ ಸ್ಥಿತಿಗೆ ಬರುತ್ತಾರೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.

ಮೈಸೂರಿನಲ್ಲಿ ಯುವಕನೊಬ್ಬ ಮೊಬೈಲ್ ರಿಪೇರಿ ಮಾಡಿಸಲಾಗಲಿಲ್ಲವೆಂದು ಆತ್ಮಹತ್ಯೆಗೆ ಶರಣಾಗಿದ್ದಾನೆ! ಚಿಕನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ 22 ವರ್ಷದ ಯುವಕನ ಆರ್ಥಿಕ ಪರಿಸ್ಥಿತಿ ಸರಿಯಿರಲಿಲ್ಲ. ಇತ್ತೀಚೆಗೆ ಆತನ ಮೊಬೈಲ್ ನೀರಿಗೆ ಬಿದ್ದು ಹಾಳಾಗಿತ್ತು.

ಇದನ್ನು ರಿಪೇರಿಯೂ ಮಾಡಿಸಲಾಗಲಿಲ್ಲ ಎಂಬ ಕಾರಣಕ್ಕೆ ಮನನೊಂದಿದ್ದ ಯುವಕ ನೇಣಿಗೆ ಶರಣಾಗಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ತಿ ವಿವಾದ: ತಮ್ಮನಿಗೇ ಇರಿದ ಅಣ್ಣಂದಿರು