Select Your Language

Notifications

webdunia
webdunia
webdunia
webdunia

ಕೊರಗಜ್ಜನಿಗೆ ಅವಮಾನ ಮಾಡಿದ ಮುಸ್ಲಿಂ ವರನ ವಿರುದ್ಧ ಪ್ರಕರಣ ದಾಖಲು

ಕೊರಗಜ್ಜನಿಗೆ ಅವಮಾನ ಮಾಡಿದ ಮುಸ್ಲಿಂ ವರನ ವಿರುದ್ಧ ಪ್ರಕರಣ ದಾಖಲು
ಮಂಗಳೂರು , ಭಾನುವಾರ, 9 ಜನವರಿ 2022 (09:04 IST)
ಮಂಗಳೂರು: ತುಳುನಾಡಿನ ಆರಾಧ್ಯ ದೈವ ಕೊರಗಜ್ಜನಿಗೆ ಅವಮಾನ ಮಾಡಿದ ಮುಸ್ಲಿಂ ವರ ಹಾಗೂ ವಧುವಿನ ಕುಟುಂಬಸ್ಥರ ವಿರುದ್ಧ ಪ್ರಕರಣ ದಾಖಲಾಗಿದೆ.

ಬಂಟ್ವಾಳದಲ್ಲಿ ಕಾಸರಗೋಡಿನ ಉಪ್ಪಳ ಮೂಲದ ಬಶಿತ್ ಎಂಬ ವರ ಮದುವೆ ಕಾರ್ಯಕ್ರಮದಲ್ಲಿ ಈ ರೀತಿ ಅವಹೇಳನ ಮಾಡಿದ್ದ. ಬಂಟ್ವಾಳ ತಾಲೂಕಿನ ವಿಟ್ಲದ ಚೇತನ್ ಎಂಬವರು ಈ ಬಗ್ಗೆ ದೂರು ನೀಡಿದ್ದರು. ಕೊರಗಜ್ಜನ ವೇಷ ಹಾಕಿ ವರ ಮದುವೆ ಮನೆಯಲ್ಲಿ ಕುಣಿಯುವ ದೃಶ್ಯ ವೈರಲ್ ಆಗಿತ್ತು. ಇದು ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿತ್ತು.

ಈ ಬಗ್ಗೆ ದೂರು ಸಲ್ಲಿಕೆಯಾದ ಹಿನ್ನಲೆಯಲ್ಲಿ ವರ ಮತ್ತು ವಧುವಿನ ಕುಟುಂಬಸ್ಥರ ವಿರುದ್ಧ ಧರ್ಮ ದ್ವೇಷ,  ಧರ್ಮವನ್ನು ಅವಮಾನಿಸಿದ ಕೃತ್ಯದ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಂಚ ರಾಜ್ಯಗಳ ಚುನಾವಣೆ ಡೇಟ್ ಫಿಕ್ಸ್?