Select Your Language

Notifications

webdunia
webdunia
webdunia
webdunia

ಎಮ್ಮೆ ಬೆಳೆ ಹಾಳು ಮಾಡಿದ್ದಕ್ಕೆ 15 ವರ್ಷದ ಬಾಲಕನನ್ನು ಹೊಡೆದು ಕೊಂದ ಕುಡುಕರು

ಎಮ್ಮೆ ಬೆಳೆ ಹಾಳು ಮಾಡಿದ್ದಕ್ಕೆ 15 ವರ್ಷದ ಬಾಲಕನನ್ನು ಹೊಡೆದು ಕೊಂದ ಕುಡುಕರು
ಲಕ್ನೋ , ಮಂಗಳವಾರ, 23 ಜೂನ್ 2020 (07:47 IST)
ಲಕ್ನೋ : ಎಮ್ಮೆ ತೋಟಕ್ಕೆ ನುಗ್ಗಿಬೆಳೆ ಹಾಳು ಮಾಡಿದ್ದಕ್ಕೆ 15 ವರ್ಷದ ಬಾಲಕನನ್ನು ಮೂವರು ಕುಡುಕರು ಸೇರಿ ಹೊಡೆದು ಕೊಂದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಕುಲ್ದೀಪ್ ಯಾದವ್(15) ಮೃತಪಟ್ಟ ಬಾಲಕ. ಸಾಧು ಸಿಂಗ್, ಧರ್ಮೇಂದ್ರ ಸಿಂಗ್, ಮತ್ತು ಭೂಪಿಂದರ್ ಕೊಂದ ಆರೋಪಿಗಳು. ಬಾಲಕ ಗೆಳೆಯರ ಜೊತೆ ಆಟಾಡುತ್ತಿದ್ದಾಗ ಆತನ ಎಮ್ಮೆ ಆರೋಪಿಗಳ ಕಬ್ಬಿನ ಗದ್ದೆಗೆ ನುಗ್ಗಿ ಬೆಳೆ ಹಾಳು ಮಾಡಿದೆ. ಇದರಿಂದ ಕೋಪಗೊಂಡ ಆರೋಪಿಗಳು ಎಮ್ಮೆಯನ್ನು ಕಟ್ಟಿ ಹಾಕಿದ್ದಾರೆ. ಎಮ್ಮೆ ಬಿಡುವಂತೆ ಬಾಲಕ ಕೇಳಿಕೊಂಡರು ಅವರು ಬಿಡದ ಕಾರಣ ಅವರ ನಡುವೆ ಜಗಳ ನಡೆದು ಮೂವರು ಸೇರಿ ಬಾಲಕನನ್ನು ಕೋಲಿನಿಂದ ಹಲ್ಲೆ ಮಾಡಿದ್ದಾರೆ.

ಇದರ ಪರಿಣಾಮ ಬಾಲಕನಿಗೆ ಗಂಭೀರ ಗಾಯವಾಗಿದ್ದು ಆತ ಸಾವನಪ್ಪಿದ್ದಾನೆ. ಮೂವರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಮೂವರ ವಿರುದ್ಧ ಎಫ್ ಐಆರ್ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

10 ಬಾಟಲ್ ಬಿಯರ್ ಕುಡಿದು 18 ಗಂಟೆಗಳ ಕಾಲ ನಿದ್ದೆ ಮಾಡಿದ ವ್ಯಕ್ತಿಗೆ ಆಗಿದ್ದೇನು ಗೊತ್ತಾ?