Publish Date: Tue, 16 Jan 2018 (10:12 IST)
Updated Date: Tue, 16 Jan 2018 (10:20 IST)
ಗೋವಾ : ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಗೋವಾ ನೀರಾವರಿ ಸಚಿವ ವಿನೋದ್ ಪಾಲೇಕರ್ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
‘ಕರ್ನಾಟಕ ರಾಜ್ಯದಿಂದ ಪ್ರತ್ಯಕ್ಷ ದರ್ಶಿಗಳನ್ನು ಒಲಿಸಿಕೊಳ್ಳಲು ಹಣ ನೀಡಿಲಾಗಿದೆ. ಕರ್ನಾಟಕ ಪರ ಸಾಕ್ಷಿ ಎ.ಕೆ.ಗೊಸೈನ್ ಅವರಿಗೆ ಹಣ ನೀಡಿದೆ’ ಎಂದು ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಗೊಸೈನ್ ಅವರು ನ್ಯಾಯಾಧಿಕರಣದಲ್ಲಿ ತಿಳಿಸಿದ್ದು, ಕರ್ನಾಟಕ ಪ್ರತಿದಿನ ತನಗೆ 50 ಸಾವಿರ ರೂ.ನೀಡಿದೆ ಎಂದು ಹೇಳಿದ್ದಾರೆ. ಕರ್ನಾಟಕದಿಂದ ವರದಿ ತಯಾರಿಕೆಗೆ ಗೊಸೈನ್ ಅವರಿಗೆ 5 ಲಕ್ಷ ರೂ. ಭತ್ಯ ನೀಡಿರುವುದರ ಬಗ್ಗೆ ಸಚಿವ ವಿನೋದ್ ಪಾಲೇಕರ್ ಆರೋಪ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ