Publish Date: Sat, 21 Oct 2017 (08:45 IST)
Updated Date: Sat, 21 Oct 2017 (08:47 IST)
ಲಕ್ನೋ: ತಾಜ್ ಮಹಲ್ ನ್ನು ಪ್ರವಾಸೋದ್ಯಮ ಇಲಾಖೆ ಕೈಪಿಡಿಯಿಂದ ಕೈಬಿಟ್ಟು ವಿವಾದವೆಬ್ಬಿಸಿದ್ದ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಇದೀಗ ಮತ್ತೊಂದು ವಿವಾದ ಮೈಮೆಲೆ ಎಳೆದುಕೊಂಡಿದೆ.
ಜನ ನಾಯಕರು ಬಂದಾಗಿ ಅಧಿಕಾರಿಗಳು ಎದ್ದು ನಿಂತು ಗೌರವ ಸಲ್ಲಿಸಬೇಕು. ಅವರು ನಿರ್ಗಮಿಸುವಾಗಲೂ ಹೀಗೆಯೇ ಮಾಡಬೇಕು ಎಂದು ಸಿಎಂ ಯೋಗಿ ಸರ್ಕಾರ ಆದೇಶಿಸಿದೆ.
ಇನ್ನು ಮುಂದೆ ಯಾವುದೇ ಶಾಸಕರು, ಸಚಿವರು, ಸಂಸದರು ಬಂದಾಗ ಸರ್ಕಾರಿ ಅಧಿಕಾರಿಗಳು ತಮ್ಮ ಆಸನದಿಂದ ಎದ್ದು ನಿಂತು ಗೌರವ ಸಲ್ಲಿಸಬೇಕು ಎಂದು ಹೊಸ ಆದೇಶ ಹೊರಡಿಸಲಾಗಿದೆ. ಒಂದೆಡೆ ಪ್ರಧಾನಿ ಮೋದಿ ವಿಐಪಿ ಸಂಸ್ಕೃತಿ ನಿಲ್ಲಿಸಬೇಕೆಂದು ಕರೆಕೊಡುತ್ತಿದ್ದರೆ, ಇತ್ತ ಯೋಗಿ ಸರ್ಕಾರ ಇಂತಹದ್ದೊಂದು ಆದೇಶ ನೀಡಿರುವುದು ಮತ್ತೆ ವಿವಾದವಾಗುವ ಎಲ್ಲಾ ಲಕ್ಷಣಗಳಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ