Select Your Language

Notifications

webdunia
webdunia
webdunia
webdunia

ರಾತ್ರೋ ರಾತ್ರಿ ರೋಡಿಗಿಳಿದ ಸಚಿವ ಕೆಜೆ ಜಾರ್ಜ್

ರಾತ್ರೋ ರಾತ್ರಿ ರೋಡಿಗಿಳಿದ ಸಚಿವ ಕೆಜೆ ಜಾರ್ಜ್
ಬೆಂಗಳೂರು , ಶನಿವಾರ, 21 ಅಕ್ಟೋಬರ್ 2017 (08:37 IST)
ಬೆಂಗಳೂರು: ಮಳೆ ಬಿಟ್ಟ ಮೇಲೆ ರಸ್ತೆ ರಿಪೇರಿ ಮಾಡುತ್ತೇವೆ ಎಂದಿದ್ದ ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ಮಳೆ ಬಿಟ್ಟು ಮೂರು ದಿನ ಕಳೆದ ಮೇಲೆ ಬೆಂಗಳೂರು ರಸ್ತೆ ರಿಪೇರಿ ಕಾಮಗಾರಿಯನ್ನು ಖುದ್ದು ಮೇಲುಸ್ತುವಾರಿ ವಹಿಸಿದ್ದಾರೆ.

 
ನಗರದ ರಸ್ತೆಗಳಲ್ಲಿ ಗುಂಡಿ ಬಿದ್ದು, ಹಲವು ಅಪಘಾತಗಳಾದ ಮೇಲೆ ಸರ್ಕಾರದ ಮೇಲೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಅಧಿಕಾರಿಗಳೊಂದಿಗೆ ರಾತ್ರೋ ರಾತ್ರಿ ನಗರದಾದ್ಯಂತ ಸಂಚರಿಸಿ ಕಾಮಗಾರಿಗಳನ್ನು ಖುದ್ದು ಪರಿಶೀಲಿಸಿದರು.

ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಿದರಲ್ಲದೆ, ಸಲಹೆ ಸೂಚನೆಗಳನ್ನು ನೀಡಿದರು. ಬಹುತೇಕ ಕಡೆ ರಸ್ತೆ ಗುಂಡಿಗೆ ತೇಪೆ ಹಾಕುವ ಕೆಲಸವೂ ನಡೆಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಷ್ಯಾ-ಭಾರತ ಸಮರಾಭ್ಯಾಸ ನೋಡಿ ಚೀನಾ ಕಂಗಾಲು