Select Your Language

Notifications

webdunia
webdunia
webdunia
webdunia

ಬಿಎಸ್ ವೈಗೆ ಮುಂದುವರಿದ ಚಿಕಿತ್ಸೆ

ಬಿಎಸ್ ವೈಗೆ ಮುಂದುವರಿದ ಚಿಕಿತ್ಸೆ
ಬೆಂಗಳೂರು , ಶುಕ್ರವಾರ, 20 ಅಕ್ಟೋಬರ್ 2017 (09:13 IST)
ಬೆಂಗಳೂರು: ಕಫ ಸಮಸ್ಯೆಯಿಂದ ಬಳಲುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಆರೋಗ್ಯ ಇನ್ನೂ ಸುಧಾರಿಸದ ಹಿನ್ನಲೆಯಲ್ಲಿ ಸಾಗರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.

 
ಜ್ವರ, ರಕ್ತದೊತ್ತಡ ಸಮಸ್ಯೆಯಿಂದಾಗಿ ಎರಡು ದಿನಗಳ ಹಿಂದೆ ಬಿಎಸ್ ವೈರನ್ನು ಸಾಗರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜ್ವರ ಕಡಿಮೆಯಾಗಿದ್ದರೂ ಕಫದ ಸಮಸ್ಯೆ ಇನ್ನೂ ನಿವಾರಣೆಯಾಗದಿರುವುದರಿಂದ ಬಿಎಸ್ ವೈಗೆ ಚಿಕಿತ್ಸೆ ಮುಂದುವರಿಸಲಾಗಿದೆ.

ಡಾ. ಜಗದೀಶ್ ಮತ್ತು ಡಾ. ಪ್ರಮೋದ್ ನೇತೃತ್ವದ ತಂಡ ಬಿಎಸ್ ವೈಗೆ ಚಿಕಿತ್ಸೆ ನೀಡುತ್ತಿದೆ. ಸಂಪೂರ್ಣ ಸುಧಾರಿಸಿದ ಮೇಲೆಯೇ ಆಸ್ಪತ್ರೆಯಿಂದ ಬಿಎಸ್ ವೈ ಹೊರಬರಬಹುದು ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜಿಯೋ, ಏರ್ ಟೆಲ್ ನಂತರ ಬಿಎಸ್ಎನ್ಎಲ್ ನಿಂದ ಅಗ್ಗದ ಫೋನ್