Select Your Language

Notifications

webdunia
webdunia
webdunia
webdunia

ಅಮಿತ್ ಷಾ ನೇತೃತ್ವದಲ್ಲಿ ಶಾಸಕರಾದ ಪಿ.ರಾಜೀವ್, ಯೋಗೇಶ್ವರ್ ಬಿಜೆಪಿ ಸೇರ್ಪಡೆ

ಅಮಿತ್ ಷಾ ನೇತೃತ್ವದಲ್ಲಿ ಶಾಸಕರಾದ ಪಿ.ರಾಜೀವ್, ಯೋಗೇಶ್ವರ್ ಬಿಜೆಪಿ ಸೇರ್ಪಡೆ
ಬೆಂಗಳೂರು , ಗುರುವಾರ, 19 ಅಕ್ಟೋಬರ್ 2017 (14:12 IST)
ಬೆಂಗಳೂರು: ಬಿಎಸ್ಆರ್ ಕಾಂಗ್ರೆಸ್ ಶಾಸಕ ಪಿ.ರಾಜೀವ್ ಕುಡಚಿ ಮತ್ತು ಕಾಂಗ್ರೆಸ್ ತೊರೆದಿರುವ ಶಾಸಕ ಸಿ.ಪಿ.ಯೋಗೇಶ್ವರ್ ಮುಂದಿನ ತಿಂಗಳು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.

ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಜತೆ ಅಂತಿಮ ಸುತ್ತಿನ ಮಾತುಕತೆ ನಡೆದಿದೆ ಎನ್ನಲಾಗಿದೆ. ಪಿ.ರಾಜೀವ್ ಗೆ ಕುಡಚಿ ಕ್ಷೇತ್ರದಿಂದ ಟಿಕೆಟ್  ನೀಡುವುದು ಕನ್ಫರ್ಮ್ ಆಗಿದ್ಯಂತೆ. ಇನ್ನು ಶಾಸಕ ಯೋಗೇಶ್ವರ್ ಸೂಚಿಸುವ ವ್ಯಕ್ತಿಗೆ ಮದ್ದೂರಿನಿಂದ ಟಿಕೆಟ್ ನೀಡುವ ಭರವಸೆ ನೀಡಲಾಗಿದೆ ಎನ್ನಲಾಗಿದೆ.
webdunia

ಹೀಗಾಗಿ ನ.2 ರಂದು ತುಮಕೂರಿನಲ್ಲಿ ಬಿಜೆಪಿ ಪರಿವರ್ತನಾ ರ್ಯಾಲಿ ಹಮ್ಮಿಕೊಂಡಿದೆ. ಅಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ನೇತೃತ್ವದಲ್ಲಿ ಯೋಗೇಶ್ವರ್ ಮತ್ತು ಪಿ.ರಾಜೀವ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಟಾಕಿ ತಂದ ಅವಘಡ: ಬೆಂಗಳೂರಿನಲ್ಲಿ 11 ಮಂದಿಗೆ ಗಾಯ