Select Your Language

Notifications

webdunia
webdunia
webdunia
Friday, 11 April 2025
webdunia

ಕಾವೇರಿ ಮಂಡಳಿ ರಚನೆಯಾಗದಿದ್ದರೆ ಐಪಿಎಲ್ ಪಂದ್ಯವೂ ಇಲ್ಲ!

ಕಾವೇರಿ ವಿವಾದ
ಚೆನ್ನೈ , ಬುಧವಾರ, 11 ಏಪ್ರಿಲ್ 2018 (08:33 IST)
ಚೆನ್ನೈ; ಕಾವೇರಿ ಜಲನಿರ್ವಹಣಾ ಮಂಡಳಿ ರಚನೆಯಾಗಬೇಕೆಂದು ಒತ್ತಾಯಿಸಿ ತಮಿಳುನಾಡಿನಲ್ಲಿ ನಡೆಯುತ್ತಿರುವ ಪ್ರತಿಭಟನೆ ಐಪಿಎಲ್ ಪಂದ್ಯಕ್ಕೂ ತಟ್ಟಿದೆ.

ಕೋಲ್ಕೊತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ನಡುವಿನ ಪಂದ್ಯಕ್ಕೆ ಮೊದಲು ಹಲವಾರು ಮಂದಿ ಪ್ರತಿಭಟನಾಕಾರರು ಮೈದಾನದ ಹೊರಗೆ ಪ್ರತಿಭಟನೆ ನಡೆಸಿದ್ದು, ಕಾವೇರಿ ವಿವಾದ ಇತ್ಯರ್ಥವಾಗದೇ ಚೆನ್ನೈಯಲ್ಲಿ ಪಂದ್ಯವೂ ನಡೆಯುವಂತಿಲ್ಲ ಎಂದು ಒತ್ತಾಯಿಸಿದ್ದಾರೆ.

ಕಾವೇರಿ ಜಲಮಂಡಳಿ ರಚನೆಯಾಗುವವರೆಗೂ ಚೆನ್ನೈನಲ್ಲಿ ನಿಗದಿಯಾಗಿರುವ ಎಲ್ಲಾ ಪಂದ್ಯಗಳನ್ನು ರದ್ದುಗೊಳಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಹೀಗಾಗಿ ಪಂದ್ಯ ನಡೆಯುವ ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪಕ್ಷದ ಹಿತಕ್ಕಾಗಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದೇನೆ- ಪ್ರಜ್ವಲ್ ರೇವಣ್ಣ