Select Your Language

Notifications

webdunia
webdunia
webdunia
webdunia

ಅಪರಾಧಿ ರಾಮ್ ರಹೀಂ ಸಿಂಗ್ ಪರ ಸಾಕ್ಷಿ ಮಹಾರಾಜ್ ಬ್ಯಾಟಿಂಗ್

BJP
ಲಕ್ನೋ , ಶನಿವಾರ, 26 ಆಗಸ್ಟ್ 2017 (15:30 IST)

ಲಕ್ನೋ: ಸದಾ ವಿವಾದಾತ್ಮಕ ಹೇಳಿಕೆ ಮೂಲಕ ಸುದ್ದಿಯಲ್ಲಿರುವ ಸಂಸದ ಸಾಕ್ಷಿ ಮಹಾರಾಜ್, ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಯಾಗಿರುವ ದೇರಾ ಸಚ್ಚಾ ಸೌದಾ ಮುಖ್ಯಸ್ಥ ರಾಮ್ ರಹೀಂ ಸಿಂಗ್ ಪರ ಹೇಳಿಕೆ ನೀಡಿ ಮತ್ತೆ ಸುದ್ದಿಯಲ್ಲಿದ್ದಾರೆ.

ಉನ್ನಾವ್ ನಲ್ಲಿ ಮಾತನಾಡಿರುವ ಸಾಕ್ಷಿ ಮಹರಾಜ್, ಸ್ವಯಂ ಪೋಷಿತ ದೇವ ಮಾನವ ರಾಮ್ ರಹೀಂ ಸಿಂಗ್ ವಿರುದ್ಧ ಅತ್ಯಾಚಾರ ಆರೋಪ ಮಾಡಿರುವ ಮಹಿಳೆ ಮಾತ್ರ ಇದ್ದಾರೆ. ಆದರೆ ಬಾಬಾ ಪರ ಕೋಟ್ಯಂತರ ಭಕ್ತರು  ನೀಡಿರುವ ಹೇಳೊಕೆ ಸರಿಯೋ ಅಥವಾ ರಾಮ್ ರಹೀಂ ಪರ ಇರುವ ಕೋಟ್ಯಂತರ ಭಕ್ತರು ಸರಿಯೋ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.


ಇಂತಹ ತೀರ್ಪು ನೀಡುವ ಮೂಲಕ ಭಾರತೀಯರ ಸಂಸ್ಕೃತಿಕ ಭಾವನೆಗಳಿಗೆ ಧಕ್ಕೆ ತರುವ ಹುನ್ನಾರ ನಡೆದಿದೆ ಎಂದು ಕೋರ್ಟ್ ತೀರ್ಪು ವಿರುದ್ಧ ಕಿಡಿಕಾರಿದ್ದಾರೆ.

ಜಾಮಾ ಮಸೀದಿ ಮುಖ್ಯಸ್ಥ ಶಾಹಿ ಇಮಾಮ್ ವಿರುದ್ಧ ಹಲವು ಕೇಸ್ ದಾಖಲಾಗಿವೆ. ಆದರೆ ಇವರನ್ನ ಏಕೆ ಸುಪ್ರೀಂಕೋರ್ಟ್ ಅಥವಾ ಹೈ ಕೋರ್ಟ್ ಕರೆಯುವುದಿಲ್ಲ. ಅವರೇನು ಇವರ ಸಂಬಂಧಿಯೇ ಎಂದು ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಎಂ.ಕೆ.ಗಣಪತಿ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ