ಅಹಮದಾಬಾದ್: ಏರ್ ಇಂಡಿಯಾ ವಿಮಾನ ದುರಂತವಾಗಿ ನಾಲ್ಕು ದಿನವಾದರೂ ಇನ್ನೂ ಎಲ್ಲರ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿಲ್ಲ. ಈ ನಡುವೆ ಒಂದೇ ಶವ ಚೀಲದಲ್ಲಿ ಎರಡು ತಲೆ ಇದ್ದಿದ್ದು ಪತ್ತೆಯಾಗಿದೆ. ಹೀಗಾಗಿ ಕುಟುಂಬಸ್ಥರು ಮೃತದೇಹವನ್ನು ಆಸ್ಪತ್ರೆಗೆ ಮರಳಿಸಿದ್ದಾರೆ.
ವಿಮಾನ ದುರಂತದಲ್ಲಿ ಸಾವನ್ನಪ್ಪಿದವರ ಮೃತದೇಹಗಳನ್ನು ಗುರುತಿಸುವ ಸ್ಥಿತಿಯಲ್ಲೇ ಇಲ್ಲ. ಅಷ್ಟರಮಟ್ಟಿಗೆ ಸುಟ್ಟು ಕರಕಲಾಗಿದೆ. ಹೀಗಾಗಿ ಕುಟುಂಬಸ್ಥರ ಡಿಎನ್ ಎ ಮ್ಯಾಚ್ ಮಾಡಿ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ. ಇನ್ನೂ ಕೇವಲ 80 ಮೃತದೇಹಗಳ ಡಿಎನ್ಎ ಪರೀಕ್ಷೆಯಷ್ಟೇ ನಡೆದಿದೆ.
ಈ ನಡುವೆ ಸಂಬಂಧಿಕರೊಬ್ಬರಿಗೆ ಮೃತದೇಹದ ಬ್ಯಾಗ್ ಹಸ್ತಾಂತರಿಸುವಾಗ ಅದರಲ್ಲಿ ಎರಡು ತಲೆ ಕಂಡುಬಂದಿದೆ. ಹೀಗಾಗಿ ಕುಟುಂಬಸ್ಥರು ಅದನ್ನು ಮತ್ತೆ ಆಸ್ಪತ್ರೆಗೆ ಮರಳಿಸಿದ್ದಾರೆ. ಇದೀಗ ಮತ್ತೊಮ್ಮೆ ಡಿಎನ್ ಎ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಮರಳಿಸಲಿದ್ದಾರೆ.