Select Your Language

Notifications

webdunia
webdunia
webdunia
webdunia

Air India Plane crash: ವಿಮಾನ ಅಪಘಾತಕ್ಕೆ ಇದೇ ಕಾರಣ: ಮಲ್ಲಿಕಾರ್ಜುನ ಖರ್ಗೆ ಸ್ಪೋಟಕ ಹೇಳಿಕೆ

Mallikarjun Kharge

Krishnaveni K

ನವದೆಹಲಿ , ಗುರುವಾರ, 12 ಜೂನ್ 2025 (20:37 IST)
ನವದೆಹಲಿ: ಗುಜರಾತ್ ನ ಅಹಮ್ಮದಾಬಾದ್ ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತಕ್ಕೆ ಕಾರಣವೇನಿರಬಹುದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.

ಲಂಡನ್ ಗೆ ತೆರಳುತ್ತಿದ್ದ 242 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಅಹಮ್ಮದಾಬಾದ್ ಏರ್ ಪೋರ್ಟ್ ನಲ್ಲಿ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ. ಇದಕ್ಕೆ ಕಾರಣವೇನಿರಬಹುದು ಎಂದು ನಿಖರವಾಗಿ ತನಿಖೆಯಿಂದಷ್ಟೇ ತಿಳಿಯಬಹುದಾಗಿದೆ.

ಆದರೆ ಇದೀಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿಮಾನ ಪತನಕ್ಕೆ ಇದೇ ಕಾರಣವಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಅನಾನುಕೂಲವಾದ ವಾತಾವರಣವಿದ್ದರೂ ಕೆಲವರು ಏನೂ ಆಗಲ್ಲ ಎಂದು ವಿಮಾನ ಹೊರಡಲು ಅವಸರ ಮಾಡಿದ್ದರು ಎಂದು ನನಗೆ ಈಗ ಕೆಲವು ಮೂಲಗಳಿಂದ ಮಾಹಿತಿ ಬಂದಿದೆ. ಇದರ ಸತ್ಯಾಸತ್ಯತೆ ಇನ್ನು ತನಿಖೆಯಿಂದ ಗೊತ್ತಾಗಬೇಕಷ್ಟೇ.

ಸದ್ಯಕ್ಕೆ ನಾವು ಮಡಿದವರ ಕುಟುಂಬಕ್ಕೆ ಸಂತಾಪ ಹೇಳುತ್ತೇವೆ. ಇಂತಹ ದುರ್ಘಟನೆ ಆಗಿದ್ದು ನಿಜಕ್ಕೂ ಖೇದಕರ. ಈ ಘಟನೆಗೆ ಯಾಕೆ ಆಯ್ತು, ಏನು ಕಾರಣ, ತಾಂತ್ರಿಕವಾಗಿ ಸಮಸ್ಯೆ ಏನಾಗಿತ್ತು ಎಂಬುದರ ಬಗ್ಗೆ ಸುದೀರ್ಘ ತನಿಖೆ ನಡೆಸಬೇಕು ಎಂದು ನಾವು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇವೆ.

Share this Story:

Follow Webdunia kannada

ಮುಂದಿನ ಸುದ್ದಿ

Air India Plane crash: ಸುತ್ತಲೂ ಹೆಣಗಳ ರಾಶಿಯಿತ್ತು, ಬದುಕುಳಿದ ಏಕೈಕ ವ್ಯಕ್ತಿ ಬಿಚ್ಚಿಟ್ಟ ಭಯಾನಕ ಸತ್ಯ