Select Your Language

Notifications

webdunia
webdunia
webdunia
webdunia

ಡೇರಾ ಬಾಬಾ ಆಯ್ತು.. ಇನ್ನೊಬ್ಬ ಬಾಬಾನಿಗೂ ಇಂದೇ ಅಗ್ನಿಪರೀಕ್ಷೆ

ಡೇರಾ ಬಾಬಾ ಆಯ್ತು.. ಇನ್ನೊಬ್ಬ ಬಾಬಾನಿಗೂ ಇಂದೇ ಅಗ್ನಿಪರೀಕ್ಷೆ
ನವದೆಹಲಿ , ಮಂಗಳವಾರ, 29 ಆಗಸ್ಟ್ 2017 (11:05 IST)
ನವದೆಹಲಿ: ಆಶ್ರಮದಲ್ಲಿ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಯಾಣದಲ್ಲಿ ಇನ್ನೊಬ್ಬ ಸ್ವಯಂ ಘೋಷಿತ ದೇವಮಾನವ ರಾಂಪಾಲ್ ಭವಿಷ್ಯ ಇಂದು ನಿರ್ಧಾರವಾಗಲಿದೆ.

 
ಡೇರಾ ಸಚ್ ಬಾಬಾಗೆ ಅತ್ಯಾಚಾರ ಪ್ರಕರಣದಲ್ಲಿ 20 ವರ್ಷ ಜೈಲು ಶಿಕ್ಷೆಯಾದ ಬೆನ್ನಲ್ಲೇ ರಾಂಪಾಲ್ ಮೇಲಿನ ಪ್ರಕರಣದ ತೀರ್ಪು ಇಂದು ಬರಲಿದೆ.

ಆಶ್ರಮದಲ್ಲಿ ಓರ್ವ ಬಾಲಕಿ ಸೇರಿದಂತೆ ಹಲವರ ಕೊಲೆ ಪ್ರಕರಣಗಳಲ್ಲಿ ಈತ ಬಂಧಿತನಾಗಿದ್ದ. ಇದಲ್ಲದೆ, ಈತನನ್ನು ಬಂಧಿಸಲು ಹೋದಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದಲ್ಲದೆ, ಬೆಂಬಲಿಗರ ಮೂಲಕ ಪೊಲೀಸರ ಮೇಲೆ ದಾಳಿಗೆ ಮುಂದಾಗಿದ್ದ. ಹಲವು ದಾಂಧಲೆ, ಕೊಲೆ ಪ್ರಕರಣಗಳಲ್ಲಿ ಬಂಧಿತನಾಗಿರುವ ಈತನ ಪ್ರಕರಣದ ತೀರ್ಪನ್ನು ಇಂದು ಬರಲಿದೆ.

ತನ್ನನ್ನು ತಾನು ದೇವಮಾನವ ಎಂದು ಕರೆಸಿಕೊಳ್ಳುವ ರಾಂಪಾಲ್ ಸತ್ಲೋಕ್ ಆಶ್ರಮ ನಿರ್ಮಿಸಿದ್ದ. ಹಲವು ಅನಾಚಾರ ನಡೆಸಿದ್ದ ರಾಂಪಾಲ್ ನನ್ನು 2014 ರಲ್ಲಿ ಬಂಧಿಸಲಾಗಿತ್ತು.

ಇದನ್ನೂ ಓದಿ.. ದತ್ತು ಪುತ್ರಿಯನ್ನೂ ಕಾಮತೃಷೆಗೆ ಬಳಸಿಕೊಂಡಿದ್ದನೇ ಡೇರಾ ಮುಖ್ಯಸ್ಥ?!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದತ್ತು ಪುತ್ರಿಯನ್ನೂ ಕಾಮತೃಷೆಗೆ ಬಳಸಿಕೊಂಡಿದ್ದನೇ ಡೇರಾ ಮುಖ್ಯಸ್ಥ?!