Select Your Language

Notifications

webdunia
webdunia
webdunia
webdunia

ಮಾತೃಭೂಮಿಯ ಬೆನ್ನಿಗೆ ಚೂರಿ ಹಾಕಿದ ಉಗ್ರ ಆದಿಲ್ ಅಹಮ್ಮದ್ ಧರ್

ಮಾತೃಭೂಮಿಯ ಬೆನ್ನಿಗೆ ಚೂರಿ ಹಾಕಿದ ಉಗ್ರ ಆದಿಲ್ ಅಹಮ್ಮದ್ ಧರ್
ಪುಲ್ವಾಮ , ಶುಕ್ರವಾರ, 15 ಫೆಬ್ರವರಿ 2019 (10:48 IST)
ಪುಲ್ವಾಮ : ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಸಿ.ಆರ್‍.ಪಿ.ಎಫ್ ಯೋಧರ ವಾಹನದ ಮೇಲೆ ದಾಳಿ ಮಾಡಿದ್ದ ಉಗ್ರ ಆದಿಲ್ ಅಹಮ್ಮದ್ ಧರ್ ಒಬ್ಬ ಭಾರತೀಯ ಎಂಬ ಶಾಕಿಂಗ್ ಮಾಹಿತಿವೊಂದು ತಿಳಿದುಬಂದಿದೆ.


ಕಾಶ್ಮೀರದ ಪುಲ್ವಾಮ ದಾಳಿ ಮಾಡಿದ ಜೈಶ್-ಇ-ಮೊಹಮದ್ ಸಂಘಟನೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹರಿಬಿಟ್ಟಿದ್ದು, ಇದರಲ್ಲಿ ಸಂಘಟನೆಯ ಧ್ವಜದ ಮುಂದೆ ಶಸ್ತ್ರಸಜ್ಜಿತನಾಗಿ ನಿಂತು ತಾನು ಮಾಡಲು ಹೊರಟ ಕೃತ್ಯದ ಬಗ್ಗೆ ಮಾತನಾಡಿದ ಆದಿಲ್ ದಾರ್, ತನ್ನ ಬೆಂಬಲಿಸುವಂತೆ ಕಾಶ್ಮೀರಿ ಮುಸ್ಲಿಮರಲ್ಲಿಯೂ ಆತ ಮನವಿ ಮಾಡಿಕೊಂಡಿದ್ದು, ಈ ವಿಡಿಯೋ ಬಿಡುಗಡೆ ಆಗುವ ವೇಳೆ ನಾನು ಸ್ವರ್ಗದಲ್ಲಿರುತ್ತೇನೆ ಎಂದು ಹೇಳಿದ್ದಾನೆ.


ಈತ ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಕಾಕ್ಪೊರಾ ನಿವಾಸಿಯಾಗಿದ್ದು, ಜೈಶ್ ಎ ಮೊಹ್ಮದ್ ಸಂಘಟನೆಯಿಂದ ಪ್ರೇರೇಪಣೆಗೊಂಡು ಕಳೆದ ವರ್ಷ ಉಗ್ರ ಸಂಘಟನೆ ಸೇರಿ ಆತ್ಮಾಹುತಿ ದಾಳಿಯ ಬಗ್ಗೆ ಪಾಕ್‍ನ ಅಬ್ದುಲ್ ರಶೀದ್ ಘಾಜಿ ಎಂಬಾತನಿಂದ  ಟ್ರೈನಿಂಗ್ ಪಡೆದ್ದನು. ಆದರೆ ಇದೀಗ ಸಿ.ಆರ್‍.ಪಿ.ಎಫ್ ಯೋಧರ ವಾಹನದ ಮೇಲೆ ದಾಳಿ ಮಾಡಿ 44 ಯೋಧರನ್ನು ಬಲಿ ಪಡೆದು ಮಾತೃಭೂಮಿಯ ಬೆನ್ನಿಗೆ ಚೂರಿ ಹಾಕಿದ್ದಾನೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

Share this Story:

Follow Webdunia kannada

ಮುಂದಿನ ಸುದ್ದಿ

ಸಿಆರ್.ಪಿ.ಎಫ್. ಯೋಧರ ಮೇಲೆ ಉಗ್ರರ ದಾಳಿ; ಕೇಂದ್ರ ಇದನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು ಎಂದ ದಿನೇಶ್ ಗುಂಡೂರಾವ್