Publish Date: Fri, 26 Mar 2021 (07:20 IST)
Updated Date: Fri, 26 Mar 2021 (07:23 IST)
ರಾಯ್ ಪುರ : ಪೊಲೀಸರಿಗೆ ಹೆದರಿ ಅತ್ಯಾಚಾರದ ಆರೋಪಿಯೊಬ್ಬ ಗಂಟಲು ಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಾರ್ಖಂಡ್ ನ ಪಶ್ಚಿಮ ಸಿಂಗ್ ಭೂಮ್ ಜಿಲ್ಲೆಯ ಚೈಬಾಸಾ ಮೂಫಾಸಿಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆರೋಪಿ ಅಪ್ರಾಪ್ತ ಬಾಲಕಿಯ ಮೇಲೆ ಮಾನಭಂಗ ಎಸಗಿದ ಹಿನ್ನಲೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದರು. ಆದರೆ ಆತ ಜೈಲಿನಿಂದ ಪರಾರಿಯಾಗಿ ಮನೆಗೆ ಬಂದು ಕೋಣೆ ಲಾಕ್ ಮಾಡಿಕೊಂಡು ಗಂಟಲು ಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಆ ವೇಳೆ ಆತನನ್ನು ಹುಡುಕಿಕೊಂಡು ಮನೆಗೆ ಬಂದ ಪೊಲೀಸರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿ ತಾನು ಅತ್ಯಾಚಾರ ಎಸಗಿಲ್ಲ, ಪೊಲೀಸರು ತನ್ನನ್ನು ಹಿಡಿದು ಹಿಂಸೆ ನೀಡುತ್ತಾರೆ ಎಂದು ಆರೋಪಿಸಿದ್ದಾನೆ ಎನ್ನಲಾಗಿದೆ.