Select Your Language

Notifications

webdunia
webdunia
webdunia
webdunia

ಆಂಧ್ರಪ್ರದೇಶದ ಶ್ರೀಶೈಲಂ ದೇವಸ್ಥಾನದ ಪ್ರಸಾದದಲ್ಲಿ ಜಿರಳೆ ಪತ್ತೆ: ಆರೋಪ ತಳ್ಳಿಹಾಕಿದ ಆಡಳಿತ ಅಧಿಕಾರಿ

ಆಂಧ್ರಪ್ರದೇಶ

Sampriya

ಆಂಧ್ರಪ್ರದೇಶ , ಸೋಮವಾರ, 30 ಜೂನ್ 2025 (15:43 IST)
Photo Credit X
ಆಂಧ್ರಪ್ರದೇಶದ ಶ್ರೀಶೈಲಂನಲ್ಲಿರುವ ಶ್ರೀ ಭ್ರಮರಾಂಬ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಭಕ್ತರಿಗೆ ವಿತರಿಸಿದ ಲಡ್ಡುವಿನಲ್ಲಿ ಜಿರಳೆ ಕಂಡುಬಂದಿದೆ ಎಂಬ ಆರೋಪವನ್ನು ದೇವಸ್ಥಾನದ ಅಧಿಕಾರಿಗಳು ತಳ್ಳಿಹಾಕಿದ್ದಾರೆ. 

ಭಕ್ತರೊಬ್ಬರ ಹೇಳಿಕೆಗೆ ಪ್ರತಿಕ್ರಿಯಿಸಿದ ದೇವಾಲಯದ ಆಡಳಿತ ಮಂಡಳಿ, "ಲಡ್ಡು ಪ್ರಸಾದ ತಯಾರಿಕೆ ಪ್ರಕ್ರಿಯೆಯನ್ನು ಸ್ವಚ್ಛ ಮತ್ತು ನೈರ್ಮಲ್ಯದ ವಾತಾವರಣದಲ್ಲಿ ಮಾಡಲಾಗುತ್ತದೆ ಮತ್ತು ಯಾವುದೇ ಲೋಪಕ್ಕೆ ಅವಕಾಶವಿಲ್ಲ ಮತ್ತು ತಯಾರಿಕೆಯಲ್ಲಿ ಬಳಸುವ ಪದಾರ್ಥಗಳು ಉತ್ತಮ ಗುಣಮಟ್ಟದ್ದಾಗಿದೆ" ಎಂದು ಸ್ಪಷ್ಟಪಡಿಸಿದರು.

ಲಡ್ಡುವಿನಲ್ಲಿ ಜಿರಳೆ ಕಂಡು ಬಂದ ನಂತರ ದೇವಸ್ಥಾನದ ಸಿಬ್ಬಂದಿ ಅದನ್ನು ವಶಪಡಿಸಿಕೊಂಡರು ಮತ್ತು ವಿಷಯವನ್ನು ಮೇಲಧಿಕಾರಿಗಳಿಗೆ ತಿಳಿಸುವಂತೆ ಸೂಚಿಸಿದರು ಎಂದು ಭಕ್ತಾಧಿ ಹೇಳಿಕೊಂಡಿದ್ದಾನೆ.

ಆದರೆ, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ ಶ್ರೀನಿವಾಸ ರಾವ್ ಆರೋಪಗಳನ್ನು ತಳ್ಳಿಹಾಕಿದ್ದು, ದೇವಸ್ಥಾನದ ಸಂಪ್ರದಾಯಗಳ ಪ್ರಕಾರ ಕಟ್ಟುನಿಟ್ಟಾಗಿ ನೈರ್ಮಲ್ಯದ ಹಿನ್ನೆಲೆಯಲ್ಲಿ ಲಡ್ಡುಗಳನ್ನು ತಯಾರಿಸಲಾಗುತ್ತದೆ ಎಂದು ವಿವರಿಸಿದರು.

ಪ್ರಸಾದ ತಯಾರಿಕೆಯಲ್ಲಿ ಗುಣಮಟ್ಟದ ಪದಾರ್ಥಗಳನ್ನು ಬಳಸಲಾಗುತ್ತಿದ್ದು, ಪದಾರ್ಥಗಳ ಗುಣಮಟ್ಟವನ್ನು ಅಧಿಕಾರಿಗಳು ನಿಯಮಿತವಾಗಿ ಮೇಲ್ವಿಚಾರಣೆ ಮಾಡುತ್ತಾರೆ ಎಂದು ಅವರು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

70 ಲಕ್ಷ ಕಾರು, ಚಿನ್ನ ಕೊಟ್ಟರೂ ಗಂಡನ ಮನೆಯವರ ಕಾಟ ತಪ್ಪಲಿಲ್ಲ: ನವವಿವಾಹಿತೆ ಆತ್ಮಹತ್ಯೆ