Select Your Language

Notifications

webdunia
webdunia
webdunia
webdunia

ವಾಹನಕ್ಕೆ ಸಿಲುಕಿ ಬೆಂಬಲಿಗ ಸಾವು: ಜಗನ್ ಮೋಗನ್‌ ರೆಡ್ಡಿಗೆ ಆಂಧ್ರದಿಂಧ ಬಿಗ್‌ ರಿಲೀಫ್‌

ಆಂಧ್ರಪ್ರದೇಶ ಹೈಕೋರ್ಟ್

Sampriya

ಆಂಧ್ರಪ್ರದೇಶ , ಶುಕ್ರವಾರ, 27 ಜೂನ್ 2025 (17:22 IST)
Photo Credit X
ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ವಾಹನಕ್ಕೆ ಸಿಲುಕಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಪ್ರಕರಣ ಸಂಬಂದ ಹೈಕೋರ್ಟ್‌ನಿಂದ ಜಗನ್‌ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. 

ಗುಂಟೂರು ಜಿಲ್ಲೆಯ ಮೂಲಕ ಸಾಗುತ್ತಿದ್ದಾಗ ಜಗನ್ ಮೋಹನ್ ಅವರ ವಾಹನಕ್ಕೆ ಸಿಲುಕಿ ಅವರ ಬೆಂಬಲಿಗನೊಬ್ಬ ಸಾವನ್ನಪ್ಪಿದ್ದ.

ಜಗನ್ ರೆಡ್ಡಿ ಅವರು ತಮ್ಮ ವಿರುದ್ಧದ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಾಲಯ, "ಎಲ್ಲಾ ಮುನ್ನೆಚ್ಚರಿಕೆಗಳ ಹೊರತಾಗಿಯೂ, ಕುಂಭಮೇಳದಲ್ಲಿಯೂ ಅಪಘಾತಗಳು ಸಂಭವಿಸಿವೆ" ಎಂದು ಗಮನಿಸಿತು. ಪ್ರಕರಣದಲ್ಲಿ ಆರೋಪಿ ಎಂದು ಪಟ್ಟಿ ಮಾಡಲಾದ ಮಾಜಿ ಮುಖ್ಯಮಂತ್ರಿಗೆ ನ್ಯಾಯಾಲಯವು ಮಧ್ಯಂತರ ರಕ್ಷಣೆಯನ್ನು ನೀಡಿದೆ.

ಹೈಕೋರ್ಟ್ ವಿಚಾರಣೆಯನ್ನು ಮಂಗಳವಾರಕ್ಕೆ (ಜುಲೈ 1) ಮುಂದೂಡಿದೆ ಮತ್ತು ಅಲ್ಲಿಯವರೆಗೆ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳದಂತೆ ಪೊಲೀಸರಿಗೆ ಸೂಚನೆ ನೀಡಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

1941ರ ಬಳಿಕ ಕೆಆರ್‌ಎಸ್‌ ಡ್ಯಾಂನಲ್ಲಿ ಮೊದಲ ಬಾರಿ 124 ಅಡಿ ತಲುಪಿದ ನೀರಿನ ಮಟ್ಟ