Select Your Language

Notifications

webdunia
webdunia
webdunia
webdunia

1941ರ ಬಳಿಕ ಕೆಆರ್‌ಎಸ್‌ ಡ್ಯಾಂನಲ್ಲಿ ಮೊದಲ ಬಾರಿ 124 ಅಡಿ ತಲುಪಿದ ನೀರಿನ ಮಟ್ಟ

ಕೆಆರ್ ಎಸ್ ಅಣೆಕಟ್ಟು

Sampriya

ಬೆಂಗಳೂರು , ಶುಕ್ರವಾರ, 27 ಜೂನ್ 2025 (17:03 IST)
Photo Credit X
ಬೆಂಗಳೂರು: 1941ರ ಬಳಿಕ ಇದೇ ಮೊದಲ ಬಾರಿಗೆ ಕೆಆರ್‌ಎಸ್‌ ಡ್ಯಾಂನಲ್ಲಿ  ನೀರಿನ ಮಟ್ಟ 124 ಅಡಿ ತಲುಪಿದೆ.  ಈ ಹಿನ್ನೆಲೆ ಮೈದುಂಬಿದ ಕೃಷ್ಣರಾಜ ಸಾಗರ ಜಲಾಶಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಬಾಗಿನ ಅರ್ಪಿಸಲಿದ್ದಾರೆ. 

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​, ಸಚಿವರು, ಶಾಸಕರು ಕಾರ್ಯಕ್ರಮದಲ್ಲಿ ಭಾಗಿಯಾಗುವರು.

1941ರ ಬಳಿಕ ಇದೇ ಮೊದಲ ಬಾರಿಗೆ ಜೂನ್​ ತಿಂಗಳಲ್ಲೇ ಜಲಾಶಯದಲ್ಲಿ ನೀರಿನ ಮಟ್ಟ 124 ಅಡಿ ತಲುಪಿದೆ.‌ ಸಾಮಾನ್ಯವಾಗಿ
ಜುಲೈ ತಿಂಗಳಾಂತ್ಯ ಅಥವಾ ಆಗಸ್ಟ್‌ನಲ್ಲಿ ಕೆಆರ್​ಎಸ್​ಗೆ ಬಾಗಿನ ಅರ್ಪಿಸಲಾಗುತ್ತದೆ. ಆದರೆ, ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜಲಾಶಯ ಜೂನ್‌ನಲ್ಲೇ​ ಭರ್ತಿಯಾಗಿದೆ.

ಉಳಿದ ಹಾಗೇ ಜಲಾಶಯದ ನೀರಿನ ಮಟ್ಟ ಜೂನ್‌ನಲ್ಲಿ ಸರಾಸರಿ 70-80 ಅಡಿ ಆಸುಪಾಸಿನಲ್ಲಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ರಾಜ್ಯಾಧ್ಯಕ್ಷ ರೇಸ್‌ನಲ್ಲಿ ನಾನಿಲ್ಲ: ಆರ್‌ ಅಶೋಕ್‌