Select Your Language

Notifications

webdunia
webdunia
webdunia
webdunia

ನನ್ನನ್ನು ಬೆಂಬಲಿಸುವವರು ಯಾರೂ ಇಲ್ಲ: ಸರ್ಕಾರದಲ್ಲಿನ ಬದಲಾವಣೆ ಬಗ್ಗೆ ಸತೀಶ ಜಾರಕಿಗೊಳಿ ಸುಳಿವು

ಸಿಎಂ ಸಿದ್ದರಾಮಯ್ಯ

Sampriya

ಬೆಂಗಳೂರು , ಗುರುವಾರ, 26 ಜೂನ್ 2025 (15:17 IST)
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಜತೆ ಎರಡು ದಿನಗಳ ಕಾಲ ದೆಹಲಿ ಪ್ರವಾಸ ಮಾಡಿದ್ದ ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ಅವರು ನೀಡಿರುವ ಹೇಳಿಕೆಯೊಂದು ಭಾರೀ ಕುತೂಹಲವನ್ನು ಮೂಡಿಸುತ್ತಿದೆ. 

ಇಂದು ತಮ್ಮ ಕಚೇರಿಯಲ್ಲಿ ಮಾಧ್ಯಮದವರು ಸರ್ಕಾರದಲ್ಲಿ ಏನಾದರೂ ಬದಲಾವಣೆ ಇದೆಯಾ ಎಂಬ ಪ್ರಶ್ನೆಗೆ ಸಚಿವ ಕೂಡಲೇ ಪ್ರತಿಕ್ರಿಯೆ ನೀಡಲಿಲ್ಲ, ಒಂದಷ್ಟು ಯೋಚನಾಮಗ್ನರಾದರು. ಪ್ರಶ್ನೆ ಅನಿರೀಕ್ಷೀತಾವಾಗೇನೂ ಇರಲಿಲ್ಲ. ನವೆಂಬರ್​ನಲ್ಲಿ ಬದಲಾವಣೆ ಆಗೋದು ನಿಜ, ಆದರೆ ಮಾಧ್ಯಮದವರು ಭಾವಿಸಿರುವಂತೆ ಭಾರೀ ಬದಲಾವಣೆಯೇನೂ ಆಗಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ಈ ಹೇಳಿಕೆ ಮೂಲಕ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎನ್ನುವುದನ್ನು ಪರೋಕ್ಷವಾಗಿ ಹೇಳಿದರು. 

ಕೆಪಿಸಿಸ ಅಧ್ಯಕ್ಷ ಸ್ಥಾನದಕ್ಕೆ ನಾನು ಪ್ರಯತ್ನ ನಡೆಸಿಲ್ಲ.  ಪ್ರಯತ್ನ ನಡೆಸಿದರೆ ಮುಂದುವರೆಸಬಹುದು. ನಾನು ಎಲ್ಲಿದ್ದೆನೋ ಅಲ್ಲೇ ಇದ್ದೇನೆ. ನನ್ನನ್ನು ಹಿಂದಿನಿಂದ ಬೆಂಬವಲಿಸುವವರು ಯಾರೂ ಇಲ್ವಲ್ಲ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಚಾಮುಂಡಿ ಬೆಟ್ಟಕ್ಕೆ ಬರುವ ವಿಐಪಿಗಳಿಗೂ ಖಡಕ್ ರೂಲ್ಸ್: ಸಾರ್ವಜನಿಕರು ಫುಲ್ ಖುಷ್