Select Your Language

Notifications

webdunia
webdunia
webdunia
webdunia

ಭತ್ತದ ರಾಶಿ ಮೇಲೆ ನೀರು ಹಾಕಿದ ಹುಡುಗನಿಗೆ ನಾಲ್ವರು ಸೇರಿ ಮಾಡಿದ್ದೇನು ಗೊತ್ತಾ?

ಭತ್ತದ ರಾಶಿ ಮೇಲೆ ನೀರು ಹಾಕಿದ ಹುಡುಗನಿಗೆ ನಾಲ್ವರು ಸೇರಿ ಮಾಡಿದ್ದೇನು ಗೊತ್ತಾ?
ಗ್ರೇಟರ್ ನೋಯ್ಡಾ , ಗುರುವಾರ, 19 ನವೆಂಬರ್ 2020 (10:29 IST)
ಗ್ರೇಟರ್ ನೋಯ್ಡಾ : 15 ವರ್ಷದ ಹುಡುಗ ಆಕಸ್ಮಿಕವಾಗಿ ಅಕ್ಕಿ ರಾಶಿ ಮೇಲೆ ನೀರು ಸಿಂಪಡಿಸಿದ್ದಕ್ಕೆ ನಾಲ್ಕು ಜನರು ಸೇರಿ ಆತನಿಗೆ ಲೈಂಗಿಕ ಕಿರುಕುಳ ನೀಡಿ ಹಲ್ಲೆ ಮಾಡಿದ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.

ಸಂತ್ರಸ್ತ ಹುಡುಗ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಅಕ್ಕಿ ರಾಶಿ ಮೇಲೆ ನೀರು ಬಿದ್ದಿದೆ. ಮರುದಿನ ನಾಲ್ಕು ಜನರು ಮಾರುತಿ ಕಾರಿನಲ್ಲಿ  ಹುಡುಗನ ಮನೆ ಬಳಿ ಬಂದು ಕೆಲಸ ಕೊಡುವ ನೆಪದಲ್ಲಿ ಹೊಲಕ್ಕೆ  ಕರೆದೊಯ್ದು ಅಲ್ಲಿ ಆತನಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಬಳಿಕ ಕಬ್ಬಿಣದ ರಾಡ್ ಮತ್ತು ಬಿದಿರಿನ ಪೈಪ್ ನಿಂದ ಆತನ ಮೇಲೆ ಹಲ್ಲೆ ಮಾಡಿ ಬಲವಂತವಾಗಿ ಮೂತ್ರ ಕುಡಿಸಿದ್ದಾರೆ.

ಈ ಬಗ್ಗೆ ಹುಡುಗನ ಕಡೆಯವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರನ್ನು ಬಂಧಿಸಿದ್ದು , ಇನ್ನೊಬ್ಬನಿಗಾಗಿ ಬಲೆ ಬೀಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೋಟೆಲ್ ನಲ್ಲಿ ಕೊಳಕು ಟಿಶ್ಯೂ ಪೇಪರ್ ಇಟ್ಟಿದ್ದನ್ನು ಪ್ರಶ್ನಿಸಿದ್ದಕ್ಕೇ ನಡೆಯಿತು ರಕ್ತಪಾತ!