Select Your Language

Notifications

webdunia
webdunia
webdunia
webdunia

ಮಹದಾಯಿ ನದಿ ನೀರು ವಿವಾದ; ಗೋವಾ ಪರ ನಿಂತರಾ ದಿನೇಶ್ ಗುಂಡೂರಾವ್?

ಮಹದಾಯಿ ನದಿ ನೀರು ವಿವಾದ; ಗೋವಾ ಪರ ನಿಂತರಾ ದಿನೇಶ್ ಗುಂಡೂರಾವ್?
ಬೆಂಗಳೂರು , ಭಾನುವಾರ, 1 ನವೆಂಬರ್ 2020 (10:40 IST)
ಬೆಂಗಳೂರು : ಮಹದಾಯಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ  ಗೋವಾ ಪರ ನಿಂತರಾ ಗೋವಾ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ಎಂಬ ಪ್ರಶ್ನೆ ಉದ್ಭವವಾಗಿದೆ.

ದಿನೇಶ್ ಗುಂಡೂರಾವ್ ಮಹದಾಯಿ ವಿಚಾರವಾಗಿ ಕಾನೂನು ಹೋರಾಟ ಮಾಡುವುದಾಗಿ ಗೋವಾ ಪರ ಹೇಳಿಕೆ ನೀಡಿದ್ರಾ? ಎಂಬ ಪ್ರಶ್ನೆ ಮೂಡಿದೆ. ಗೋವಾ ಕಾಂಗ್ರೆಸ್ ನಿರ್ಣಯಕ್ಕೆ ದಿನೇಶ್ ಬದ್ಧ . ಹೀಗಂತ ದಿನೇಶ್ ಹೇಳಿದ್ದಾರೆಂದ ಗೋವಾ ಕಾಂಗ್ರೆಸ್ ತಿಳಿಸಿದೆ. ನಮ್ಮ ನಿರ್ಣಯಕ್ಕೆ ದಿನೇಶ್ ಗುಂಡೂರಾವ್ ಬೆಂಬಲ ಇದೆ ಎಂದು ಗೋವಾ ವಿಪಕ್ಷ ನಾಯಕ ದಿಗಂಬರ ಕಾಮತ್ ಹೇಳಿಕೆ ನೀಡಿದ್ದಾರೆ.

ಹಾಗಾದರೆ  ರಾಜ್ಯದ ಹಿತಾಸಕ್ತಿ ಕಡೆಗಣಿಸಿದ್ರಾ ಎಂದು ದಿನೇಶ್ ಗುಂಡೂರಾವ್ ಹೇಳಿಕೆಗೆ ಮಹದಾಯಿ ಹೋರಾಟಗಾರರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರು ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಮಹದಾಯಿ ಹೋರಾಟಗಾರ ಅಶೋಕ್ ಚಂದರಗಿ ಆಗ್ರಹಿಸಿದ್ದಾರೆ ಎನ್ನಲಾಗಿದೆ.  

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ರಾಜೋತ್ಸವದ ಹಿನ್ನಲೆ ರಾಜ್ಯದ ಹಲವೆಡೆ ಶಾಸಕರು, ಸಚಿವರಿಂದ ಧ್ವಜಾರೋಹಣ