Publish Date: Sat, 15 Aug 2020 (18:37 IST)
Updated Date: Sat, 15 Aug 2020 (18:41 IST)
ಮದುವೆಯಾಗಿ ಹತ್ತಿರ ಹತ್ತಿರ ಎರಡು ವರ್ಷಗಳಾದರೂ ಹಾಸಿಗೆಯಲ್ಲಿ ಸುಖ ಕೊಡದ ಪತ್ನಿಯಿಂದಾಗಿ ಪತಿ ಮಾಡಬಾರದ್ದನ್ನು ಮಾಡಿದ್ದಾನೆ.
ಮೊದಲ ಪತ್ನಿಗೆ ವಿಚ್ಛೇಧನ ನೀಡಿದ್ದ ರೇಲ್ವೆ ಇಲಾಖೆ ಉದ್ಯೋಗಿ ಸುರೇಂದ್ರ ಸಿಂಗ್, ಈಗಾಗಲೇ ಇಬ್ಬರು ಗಂಡಂದಿರನ್ನು ಬಿಟ್ಟಿದ್ದ ಗೀತಾ ಜೊತೆಗೆ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದನು.
ಆದರೆ ಹತ್ತಿರ ಹತ್ತಿರ ಎರಡು ವರ್ಷಗಳು ಕಳೆದರೂ ಪತ್ನಿ ಗೀತಾ ಮಾತ್ರ ತನ್ನ ಗಂಡ ಸುರೇಂದ್ರ ಸಿಂಗ್ ಗೆ ದೈಹಿಕ ಸುಖ ನೀಡುತ್ತಿರಲಿಲ್ಲ ಎನ್ನಲಾಗಿದೆ.
ಹೀಗಾಗಿ ಖಿನ್ನತೆಗೆ ಒಳಗಾಗಿದ್ದ ಸುರೇಂದ್ರ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಹ್ಮದಾಬಾದ್ ನಲ್ಲಿ ನಡೆದಿದೆ.
ಸೊಸೆ ಗೀತಾ ವಿರುದ್ಧ ಸುರೇಂದ್ರ ಸಿಂಗ್ ನ ತಾಯಿ ದೂರು ದಾಖಲು ಮಾಡಿದ್ದಾರೆ.