Select Your Language

Notifications

webdunia
webdunia
webdunia
webdunia

ಮತ್ತೆ ಮಳೆಯಿಂದ ಮುಳುಗಡೆ ಆಯ್ತು ರಾಜಧಾನಿ

ಮತ್ತೆ ಮಳೆಯಿಂದ ಮುಳುಗಡೆ ಆಯ್ತು ರಾಜಧಾನಿ
bangalore , ಸೋಮವಾರ, 5 ಸೆಪ್ಟಂಬರ್ 2022 (20:10 IST)
ಸ್ವಲ್ಪ ದಿನಗಳಿಂದ ಬಿಡುವು ಪಡೆದಿದ್ದ ವರುಣ ಮತ್ತೆ ಅಬ್ಬರಿಸಿ ಬೊಬ್ಬೆರೆದಿದ್ದಾನೆ.ಭಾರೀ ಮಳೆಯಿಂದಾಗಿ ಮತ್ತೆ ಕೆ ಆರ್ ಪುರಂನ್ನ ಮುಖ್ಯ ರಸ್ತೆಗಳು,  ಲೇಔಟ್ ಗಳು ಜಲಾವೃತವಾಗಿದೆ.ಸರ್ಜಾಪುರ ಮುಖ್ಯರಸ್ತೆ, ರೈನ್‌ ಬೋ ಡ್ರೈವ್ ಲೇಔಟ್, ಬೆಳ್ಳಂದೂರು ರಿಂಗ್ ರಸ್ತೆಯಂತೂ ಸಂಪೂರ್ಣವಾಗಿ ಜ್ವಲ ದಿಗ್ಬಂಧನದಿಂದ ಕೂಡಿದೆ.ರಸ್ತೆಯಲ್ಲಿ ಹೆಚ್ಚಾಗಿ ನೀರು ನಿತಿರುವುದರಿಂದ ದ್ವಿಚಕ್ರ ವಾಹನ, ಆಟೋ ರಿಕ್ಷಾ ಗಳು ಕೆಟ್ಟುನಿಂತಿದೆ.
 
ಸರ್ಜಾಪುರ ಮುಖ್ಯರಸ್ತೆಯಲ್ಲಿ ಮಳೆಯಿಂದ ಟ್ರಾಫಿಕ್ ಜಾಮ್ ಆಗಿದ್ದು ,ರಸ್ತೆಯಲ್ಲಿ ಸಂಚಾರಿಸಲು ವಾಹನ ಸವಾರರ ಪರದಾಡುವಂತಾಗಿದೆ.
 
ಕೆ.ಆರ್.ಪುರ, ರಾಮಮೂರ್ತಿ ನಗರ,  ವೈಟ್‌ ಫೀಲ್ಡ್, ಹೊಸಕೋಟೆ ಸುತ್ತಮುತ್ತ ಮತ್ತೆ ಮಳೆಯ ಅಬ್ಬರ ಮುಂದುವರೆಯಲಿದೆ.ಈಗ ಆಗಿರುವ ಮಳೆಯಿಂದ ತತ್ತರಿಸಿದ ಜನರಿಗೆ ವರುಣರಾಯ ಮತ್ತಷ್ಟು ಆತಂಕ ತಂದಿಡಲಿದ್ದಾನೆ.
 

Share this Story:

Follow Webdunia kannada

ಮುಂದಿನ ಸುದ್ದಿ

ರಾಜಧಾನಿಯಲ್ಲಿ ಮಳೆತಂದಿಟ್ಟ ಅವಾಂತರ..!