Select Your Language

Notifications

webdunia
webdunia
webdunia
webdunia

ಪಕ್ಷೇತರರಾಗಿ ರೇವಣ್ಣ, ಭವಾನಿ ಸ್ಪರ್ಧೆ?

ಪಕ್ಷೇತರರಾಗಿ ರೇವಣ್ಣ, ಭವಾನಿ ಸ್ಪರ್ಧೆ?
ಹಾಸನ , ಶನಿವಾರ, 8 ಏಪ್ರಿಲ್ 2023 (19:53 IST)
ಹಾಸನ JDS ಟಿಕೆಟ್ ವಿಚಾರದಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದೆ.. ಭವಾನಿ ರೇವಣ್ಣಗೆ ಟಿಕೆಟ್ ಕೊಡಲು ಒಪ್ಪದ ಮಾಜಿ ಪ್ರಧಾನಿ H.D. ದೇವೇಗೌಡರು ಮತ್ತು ಮಾಜಿ ಸಿಎಂ H.D. ಕುಮಾರಸ್ವಾಮಿಗೆ ಮಾಜಿ ಸಚಿವ ರೇವಣ್ಣ ಶಾಕ್​ ನೀಡಿದ್ದಾರೆ.ಭವಾನಿಗೆ ಹಾಸನ ಟಿಕೆಟ್ ಕೊಡದಿದ್ದರೆ ಹೊಳೆನರಸೀಪುರದಲ್ಲಿ ತಾವು ಹಾಗೂ ಹಾಸನದಿಂದ ಭವಾನಿ ಭಂಡಾಯವಾಗಿ ನಿಲ್ಲೋ ನೇರ ಎಚ್ಚರಿಕೆಯನ್ನು ರೇವಣ್ಣ ರವಾನಿಸಿದ್ದಾರೆ.. ತಮ್ಮ ಆಪ್ತರು ಹಾಗೂ ಕುಟುಂಬ ಸದಸ್ಯರ ಮೂಲಕ ಗೌಡರಿಗೆ ತಮ್ಮ ನಿಲುವನ್ನು ರೇವಣ್ಣ ತಿಳಿಸಿದ್ದಾರೆ ಎನ್ನಲಾಗಿದೆ. ಎಂಥದ್ದೇ ಸಂದರ್ಭ ಬಂದರೂ ಕೂಡ ತಮ್ಮ ಜೊತೆ ನಿಲ್ಲೋದಾಗಿ ಆಪ್ತರ ಬೆಂಬಲವಿರುವ ಹಿನ್ನೆಲೆಯಲ್ಲಿ ರೇವಣ್ಣಗೆ ಬಲ ಬಂದಿದ್ದು, ಕುಮಾರಸ್ವಾಮಿ ಛಲ ಬಿಡದ ನಿಲುವಿನ ನಡುವೆ ಕೂಡ ಹಾಸನ ಟಿಕೆಟ್ ಪಡೆಯಲು ರೇವಣ್ಣ ತಂತ್ರ ರೂಪಿಸಿದ್ದಾರೆ. ಪತ್ನಿಗೆ ಟಿಕೆಟ್ ಕೊಡದಿದ್ದರೆ ತಮಗೂ ಬೇಡ ಎಂದು ರೇವಣ್ಣ ನೇರ ಎಚ್ಚರಿಕೆ ರವಾನಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಂದಿನಿ ಬ್ರ್ಯಾಂಡ್ ಏನ್ ಕಡಿಮೆಯಿದೆ - ಡಿಕೆಶಿ