Select Your Language

Notifications

webdunia
webdunia
webdunia
webdunia

ಕರ್ಫ್ಯೂ ಉಲ್ಲಂಘನೆ: ಸುಮ್ಮನೆ ಓಡಾಡಿದವನ ಮೇಲೆ ಎಫ್ ಐ ಆರ್

ಕರ್ಫ್ಯೂ ಉಲ್ಲಂಘನೆ: ಸುಮ್ಮನೆ ಓಡಾಡಿದವನ ಮೇಲೆ ಎಫ್ ಐ ಆರ್
ಕಾರವಾರ , ಶನಿವಾರ, 28 ಮಾರ್ಚ್ 2020 (14:38 IST)
ಕೊರೊನಾ ಸೊಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ವಿಧಿಸಲಾಗಿದ್ದ ಕರ್ಫ್ಯೂ ಆದೇಶ ಉಲ್ಲಂಘಿಸಿದ ವ್ಯಕ್ತಿ ವಿರುದ್ಧ ಕೇಸ್ ದಾಖಲಾಗಿದೆ.

ಕರ್ಫ್ಯೂ ಆದೇಶ ಉಲ್ಲಂಘಿಸಿದ ಆರೋಪದ ಮೇಲೆ ಪೋಲಿಸರು ಭಟ್ಕಳದಲ್ಲಿ ವ್ಯಕ್ತಿಯೋರ್ವನ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಭಟ್ಕಳದ ತಖೀಯಾ ಸ್ಟ್ರೀಟ್‌ನ  ಕೆ.ಎಮ್.ಶಾಝೀರ್ (39) ಆರೋಪಿ.

ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇಡೀ ದೇಶದಲ್ಲಿ ಲಾಕ್‌ ಡೌನ್ ಘೋಷಿಸಲಾಗಿದೆ. ಅದರಂತೆ ಉತ್ತರ ಕನ್ನಡ ಜಿಲ್ಲೆಯಲ್ಲೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಭಟ್ಕಳದಲ್ಲಿ ಈಗಾಗಲೇ ನಾಲ್ಕು ಸೋಂಕು ಪ್ರಕರಣದ ದಾಖಲಾದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಭಟ್ಕಳ ವ್ಯಾಪ್ತಿಯಲ್ಲಿ ಹೆಲ್ತ್ ಎಮರ್ಜೆನ್ಸಿ ಘೋಷಿಸಲಾಗಿದೆ. 

ಆದರೆ ಆರೋಪಿ ತನ್ನ ದ್ವಿಚಕ್ರ ವಾಹನದಲ್ಲಿ ಭಟ್ಕಳದ ರಸ್ತೆಯಲ್ಲಿ ಅನಗತ್ಯವಾಗಿ ಪದೇ ಪದೇ ಓಡಾಟ ಮುಂದುವರೆಸಿದ್ದ. ಈ ಬಗ್ಗೆ ಹಲವಾರು ಬಾರಿ ಪೊಲೀಸರು ಎಚ್ಚರಿಕೆ ನೀಡಿದ್ದರು. ಆದರೂ ಎಚ್ಚರಿಕೆಯನ್ನು ಕೇಳದೆ ಪೊಲೀಸರ ವಿರುದ್ಧವೇ ಅಸಭ್ಯವಾಗಿ ವರ್ತಿಸಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಐಪಿಸಿ ಕಲಂ 188, 270, 504 ಹಾಗೂ 506 ರನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಗುಂಪಾಗಿ ಸೇರಿದ ಜನರಲ್ಲಿ ಜನಜಾಗೃತಿ ಮೂಡಿಸಿ ಮಾಸ್ಕ್ ವಿತರಿಸಿದ ಶಾಸಕ