Select Your Language

Notifications

webdunia
webdunia
webdunia
webdunia

ಕೊರಗಜ್ಜನಿಗೆ ಮತ್ತೆ ಅವಮಾನ: ಯುವಕನ ಮೇಲೆ ಕೇಸ್

ಕೊರಗಜ್ಜನಿಗೆ ಮತ್ತೆ ಅವಮಾನ: ಯುವಕನ ಮೇಲೆ ಕೇಸ್
ಉಡುಪಿ , ಭಾನುವಾರ, 23 ಜನವರಿ 2022 (09:49 IST)
ಉಡುಪಿ: ಇತ್ತೀಚೆಗೆ ಮುಸ್ಲಿಂ ಧರ್ಮದ ವರನೊಬ್ಬ ತನ್ನ ಮದುವೆ ಸಮಾರಂಭದಲ್ಲಿ ತುಳುನಾಡಿನ ಆರಾಧ‍್ಯದೈವ ಕೊರಗಜ್ಜನ ವೇಷ ಹಾಕಿ ಅಪಹಾಸ್ಯ ಮಾಡಿದ್ದು ವಿವಾದಕ್ಕೀಡಾಗಿತ್ತು. ಇದೀಗ ಮತ್ತೊಂದು ಅಂತಹದ್ದೇ ಪ್ರಕರಣ ನಡೆದಿದೆ.

ಉಡುಪಿಯಲ್ಲಿ ರವೀಂದ್ರ ಎಂಬ ಯುವಕ ಕೊರಗಜ್ಜನ ವೇಷ ಹಾಕಿ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಸ್ಟೇಟಸ್ ಹಾಕಿ ಅಪಹಾಸ್ಯ ಮಾಡಿದ್ದಾನೆ. ಇದನ್ನು ಪ್ರಶ್ನಿಸಿದವರ ವಿರುದ್ಧವೇ ಇನ್ನೂ ಮಾಡುತ್ತೇನೆ ಎಂದು ಸವಾಲು ಹಾಕಿದ್ದಾನೆ.

ಈ ಘಟನೆ ಬಗ್ಗೆ ಚೇತನ್ ಎಂಬವರು ಧಾರ್ಮಿಕ ನಂಬಿಕೆಗೆ ಧಕ್ಕೆ ತಂದಿರುವ ಆರೋಪದಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಇದರ ಹಿನ್ನಲೆಯಲ್ಲಿ ಪೊಲೀಸರು ಯುವಕನ ವಿರುದ್ಧ ದೂರು ದಾಖಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

8 ವರ್ಷದ ಬಾಲಕಿಯನ್ನು ಹುರಿದುಮುಕ್ಕಿದ ನೆರೆಮನೆಯ ಯುವಕ