Select Your Language

Notifications

webdunia
webdunia
webdunia
webdunia

ಕರ್ನಾಟಕದ 1300 ಜನ ತಬ್ಲಿಘಿ ಸಭೆಯಲ್ಲಿದ್ರು ಎಂದ ಯಡಿಯೂರಪ್ಪ

ಕರ್ನಾಟಕದ 1300 ಜನ ತಬ್ಲಿಘಿ ಸಭೆಯಲ್ಲಿದ್ರು ಎಂದ ಯಡಿಯೂರಪ್ಪ
ಬೆಂಗಳೂರು , ಬುಧವಾರ, 8 ಏಪ್ರಿಲ್ 2020 (17:32 IST)
ರಾಜ್ಯದಿಂದ1300 ಕ್ಕೂ ಹೆಚ್ಚು ಜನರು ದೆಹಲಿಯಲ್ಲಿ ನಡೆದ ತಬ್ಲಿಘಿ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು ಎಂಬುದನ್ನು ಸಿಎಂ ಬಹಿರಂಗಗೊಳಿಸಿದ್ದಾರೆ.

ದೆಹಲಿಯ ನಿಜಾಮುದ್ದೀನ್ ತಬ್ಲಿಘಿ ಜಮಾತ್ ನಲ್ಲಿ ರಾಜ್ಯದ ವಿವಿಧ ಪ್ರದೇಶಗಳಿಂದ 1300ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು. ಅವರನ್ನು ಗುರುತಿಸಿ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ. ಬೇರೆ ರಾಜ್ಯಗಳಿಗೆ ಹೋದವರನ್ನೂ ಗುರುತಿಸಿ ಆ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ ಎಂದಿದ್ದಾರೆ.

ರಾಜಧಾನಿ ಬೆಂಗಳೂರಿನಿಂದ 276 ಹಾಗೂ ಬೇರೆ ಜಿಲ್ಲೆಗಳ 482 ಜನರನ್ನು ಗುರುಸಿಲಾಗಿದೆ. ಬೇರೆ ದೇಶಗಳ ಜನರನ್ನೂ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಟ್ವಿಟ್ ಮಾಡಿದ್ದಾರೆ.
 


Share this Story:

Follow Webdunia kannada

ಮುಂದಿನ ಸುದ್ದಿ

ಕೃಷಿ ಉತ್ಪನ್ನ ಮಾರಾಟ, ಶೇಖರಣೆಗೆ ಅವಕಾಶ ಕೊಟ್ಟ ಸರಕಾರ