Publish Date: Wed, 07 Aug 2019 (18:09 IST)
Updated Date: Wed, 07 Aug 2019 (18:11 IST)
ರಾಜ್ಯ ಸಚಿವ ಸಂಪುಟ ರಚನೆ ಮಾಡದೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಒನ್ ಮ್ಯಾನ್ ಶೋ ಆಡಳಿತ ನಡೆಸುತ್ತಿದ್ದಾರೆ.
ಹೀಗಂತ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ದೂರಿದ್ದಾರೆ.
ಪ್ರತಿಯೊಂದಕ್ಕೂ ಹೈಕಮಾಂಡ್ ನತ್ತ ಕೈ ತೋರಿಸುತ್ತಿರೋ ಸಿಎಂ ರ ಕ್ರಮವನ್ನು ಹಾಗೂ ನಡೆಯನ್ನು ರಾಜ್ಯದ ಜನರು ನೋಡುತ್ತಿದ್ದಾರೆ ಎಂದ್ರು.
ಕನಿಷ್ಟ ಮೂರು ಜನ ಶಾಸಕರಿಗೆ ಸಚಿವರನ್ನಾಗಿ ಮಾಡಿ ಸಚಿವ ಸಂಪುಟ ರಚನೆ ಮಾಡಿದರೆ ನೋ ಪ್ರಾಬ್ಲಂ ಅಂತ ಟೀಕೆ ಮಾಡಿದ್ರು.
ಪ್ರವಾಹ ಪರಿಸ್ಥಿತಿ ಇರೋವಾಗ ದೆಹಲಿಯತ್ತ ಬೆರಳು ತೋರಿಸೋದು ಸರಿಯಲ್ಲ ಅಂತ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಕುಟುಕಿದ್ರು.