Publish Date: Mon, 05 Aug 2019 (18:53 IST)
Updated Date: Mon, 05 Aug 2019 (18:58 IST)
ಪ್ರವಾಹ ಪೀಡಿತ ಗಡಿ ಜಿಲ್ಲೆಗೆ ಸಿಎಂ ಕೈಗೊಂಡಿದ್ದ ವೈಮಾನಿಕ ಸಮೀಕ್ಷೆ ಕೊನೆ ಕ್ಷಣದಲ್ಲಿ ದಿಢೀರ್ ರದ್ದುಗೊಂಡಿದೆ.
ಹವಾಮಾನ ವೈಪರೀತ್ಯ ಹಿನ್ನಲೆಯಲ್ಲಿ ಕೊನೆ ಕ್ಷಣದಲ್ಲಿ ಮಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರ ಪ್ರವಾಸ ರದ್ದುಗೊಂಡಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸತ್ತಿ ಮತ್ತು ನಂದೇಶ್ವರ ಗ್ರಾಮಗಳ ಪ್ರವಾಸ ರದ್ದುಗೊಳಿಸಲಾಗಿದೆ.
ಇಂದು ಪ್ರವಾಹ ಪೀಡಿತ ಗ್ರಾಮಗಳಿಗೆ ಸಿಎಂ ಭೇಟಿ ನೀಡುವವರಿದ್ರು. ಬೆಳಗ್ಗೆ ವಿಜಯಪುರ, ರಾಯಚೂರು ಜಿಲ್ಲಾ ಪ್ರವಾಸ ಮುಗಿಸಿ ಕೊನೆಯದಾಗಿ ಬೆಳಗಾವಿ ಜಿಲ್ಲಾ ಪ್ರವಾಸ ಕೈಗೊಂಡಿದ್ದರು. ಸಿಎಂ ಬಿ.ಎಸ್. ಯಡಿಯೂರಪ್ಪ
ಹೆಲಿಕಾಪ್ಟರ್ ಮೂಲಕ ಪ್ರವಾಸ ಮಾಡಲಿದ್ರು.
ಆದರೆ ಎಟಿಸಿ ಅನುಮತಿ ನಿರಾಕರಣೆ ಹಿನ್ನಲೆ ಪ್ರವಾಸ ರದ್ದುಗೊಂಡಿದೆ.
ಬೆಳಗಾವಿ ಜಿಲ್ಲೆಯಲ್ಲಿ ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಸಿಎಂ ಬೆಳಗಾವಿ ಪ್ರವಾಸ ರದ್ದುಗೊಂಡಿದೆ.