Select Your Language

Notifications

webdunia
webdunia
webdunia
webdunia

ಈ ಕಾರಣಕ್ಕೆ ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ದಿಢೀರ್ ರದ್ದು

ಈ ಕಾರಣಕ್ಕೆ ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ದಿಢೀರ್ ರದ್ದು
ಚಿಕ್ಕೋಡಿ , ಸೋಮವಾರ, 5 ಆಗಸ್ಟ್ 2019 (18:53 IST)
ಪ್ರವಾಹ ಪೀಡಿತ ಗಡಿ ಜಿಲ್ಲೆಗೆ ಸಿಎಂ ಕೈಗೊಂಡಿದ್ದ ವೈಮಾನಿಕ ಸಮೀಕ್ಷೆ ಕೊನೆ ಕ್ಷಣದಲ್ಲಿ ದಿಢೀರ್ ರದ್ದುಗೊಂಡಿದೆ.

ಹವಾಮಾನ ವೈಪರೀತ್ಯ ಹಿನ್ನಲೆಯಲ್ಲಿ ಕೊನೆ ಕ್ಷಣದಲ್ಲಿ ಮಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರ ಪ್ರವಾಸ ರದ್ದುಗೊಂಡಿದೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸತ್ತಿ ಮತ್ತು ನಂದೇಶ್ವರ ಗ್ರಾಮಗಳ ಪ್ರವಾಸ ರದ್ದುಗೊಳಿಸಲಾಗಿದೆ.

ಇಂದು ಪ್ರವಾಹ ಪೀಡಿತ ಗ್ರಾಮಗಳಿಗೆ ಸಿಎಂ ಭೇಟಿ ನೀಡುವವರಿದ್ರು. ಬೆಳಗ್ಗೆ ವಿಜಯಪುರ, ರಾಯಚೂರು ಜಿಲ್ಲಾ ಪ್ರವಾಸ ಮುಗಿಸಿ ಕೊನೆಯದಾಗಿ ಬೆಳಗಾವಿ ಜಿಲ್ಲಾ ಪ್ರವಾಸ ಕೈಗೊಂಡಿದ್ದರು. ಸಿಎಂ ಬಿ.ಎಸ್. ಯಡಿಯೂರಪ್ಪ
ಹೆಲಿಕಾಪ್ಟರ್ ಮೂಲಕ ಪ್ರವಾಸ ಮಾಡಲಿದ್ರು.

ಆದರೆ ಎಟಿಸಿ ಅನುಮತಿ ನಿರಾಕರಣೆ ಹಿನ್ನಲೆ ಪ್ರವಾಸ ರದ್ದುಗೊಂಡಿದೆ.
ಬೆಳಗಾವಿ ಜಿಲ್ಲೆಯಲ್ಲಿ ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಸಿಎಂ ಬೆಳಗಾವಿ ಪ್ರವಾಸ ರದ್ದುಗೊಂಡಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಮಹಾಸಂಸ್ಥಾನ ಮಠದಲ್ಲಿ ನಾಗರಪಂಚಮಿ ಸಂಭ್ರಮ