Publish Date: Thu, 02 Jun 2022 (18:51 IST)
Updated Date: Thu, 02 Jun 2022 (18:53 IST)
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸಹಯೋಗದೊಂದಿಗೆ, ಕರ್ನಾಟಕ ಕಟ್ಟಡ ಮತ್ತು ಇತರೆ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಕಾರ್ಮಿಕರಿಗೆ ವಾರ್ಷಿಕ ಉಚಿತ ಸಹಾಯ ಹಸ್ತ ಬಸ್ ಪಾಸು ವಿತರಿಸಲಾಗಿತ್ತು..
ಆದ್ರೆ ಈಗ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಶಾಕ್ ಒಂದನ್ನನೀಡಿದೆ..
ಇಷ್ಟುದಿನಗಳ ಕಾಲ ಬಸ್ ಪಾಸ್ ಇದೆ ಹಾರಮಾಗಿ ಎಲ್ಲಿಗೆ ಬೇಕಾದ್ರು ಹೋಗಿ ದುಡಿದುಕೊಂಡು ತಿನ್ನಬಹುದು ಅನ್ನಿತ್ತಿದ್ದ ಕಾರ್ಮಿಕರು ಇನ್ಮುಂದೆ ಟಿಕೇಟ್ ಪಡೆದು ಬಸ್ ನಲ್ಲಿ ಪ್ರಯಾಣಿಸಬೇಕಿದೆ..
ಹೌದು ಇವತ್ತಿನಿಂದ ಕಾರ್ಮಿಕರಿಗೆ ಉಚಿತವಾಗಿ ಸಿಕ್ತಿದ್ದ ಸಹಾಯಹಸ್ತ ಪಾಸ್ ಹಿಂಪಡೆಯಲಾಗ್ತಿದೆ.. ಬಿಎಂಟಿಸಿ ಮುಖ್ಯ ಸಂಚಾರ ವ್ಯೆವಸ್ಥಪಕರು ಸಹಾಯಹಸ್ತ ಪಾಸ್ ನಾ ಸ್ಥಗಿತ ಗೊಳಿಸಿದ್ದಾರೆ.. ಯಲ್ಲಾ ಕಾರ್ಮಿಕರಿಗು ಈ ಸೌಲಭ್ಯ ದೊರಕುವುದಿಲ್ಲ.. ಬೆಂಗಳೂರು ಮಹಾ ಮಗರ ಪಾಲಿಕೆಯಲ್ಲಿ ವ್ಯಾಪ್ತಿಯಲ್ಲಿ ಕಾಯಂ ವಾಸವಾಗಿರುವ ನೊಂದಾಯಿತ ನಿರ್ಮಾಣ ಕಾರ್ಮಿಕರು ಕೆಲಸದ ಸ್ಥಳಕ್ಕೆ ಹೋಗಲು ಪಾಸ್ ಪಡೆಯಲು ಅರ್ಹರಾಗಿರುತ್ತಾರೆ.