Select Your Language

Notifications

webdunia
webdunia
webdunia
webdunia

ಬಿಎಂಟಿಸಿ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

ಬಿಎಂಟಿಸಿ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ
bengaluru , ಶನಿವಾರ, 21 ಮೇ 2022 (16:01 IST)

ಚಾಲಕನ ಸಮಯಪ್ರಜ್ಞೆಯಿಂದ ಆಕ್ಸೆಲ್ ರಾಡ್ ಕಟ್ ಆಗಿ ಅಡ್ಡಾದಿಡ್ಡಿಯಾಗಿ ಹೋಗುತ್ತಿದ್ದ ಬಿಎಂಟಿಸಿ ಬಸ್ ಭಾರೀ ದುರಂತ ತಪ್ಪಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನಗರದ ಓಕಳಿಪುರಂ ಅಂಡರ್ ಪಾಸ್ ಕೆಳಗಡೆ ಘಟನೆ ಈ ಸಂಭವಿಸಿದ್ದು, ಡಿವೈಡರ್ ಗೆ ಬಡಿದು ಬಸ್ ನಿಂತಿದ್ದರಿಂದ ಯಾವುದೇ ಅಪಾಯ ಸಂಭವಿಸಲಿಲ್ಲ.

ಮೆಜೆಸ್ಟಿಕ್ ನಿಂದ ಪೀಣ್ಯ ಕಡೆಗೆ ಹೊರಟಿದ್ದ ಪ್ರಯಾಣಿಕರಿಂದ ತುಂಬಿದ್ದ ಕೆಎ01 ಎಫ್ 4659 ಸಂಖ್ಯೆ ಬಿಎಂಟಿಸಿ ಬಸ್ ಆಕ್ಸಲ್ ರಾಡ್ ಕಟ್ ಆಗಿ ದಿಢೀರನೆ ಅಡ್ಡಾದಿಟ್ಟಿ ಸಂಚರಿಸಲು ಆರಂಭಿಸಿತು.

ಘಟನೆಯಲ್ಲಿ ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಚಾಲಕನ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದ್ದು, ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಹಾಗೂ ಬಿಎಂಟಿಸಿ ಇಂಜಿನಿಯರ್ ಗಳು ಭೇಟಿ ಪರಿಶೀಲನೆ ನಡೆಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಮೂರು ಬೈಕ್ ಗಳ ಡಿಕ್ಕಿ: ನಾಲ್ವರು ಸವಾರರು ಸಾವು