Select Your Language

Notifications

webdunia
webdunia
webdunia
webdunia

ಅಧಿಕಾರಿಗಳ ಕಿರುಕುಳದಿಂದ ರೊಚ್ಚಿಗೆದ್ದ ಮಹಿಳೆ ಮಾಡಿದ್ದೇನು?

ಅಧಿಕಾರಿಗಳ ಕಿರುಕುಳದಿಂದ ರೊಚ್ಚಿಗೆದ್ದ ಮಹಿಳೆ ಮಾಡಿದ್ದೇನು?
ಆನೇಕಲ್ , ಶನಿವಾರ, 19 ಅಕ್ಟೋಬರ್ 2019 (15:39 IST)
ಕಂಪನಿವೊಂದರಲ್ಲಿ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿರೋ ಮಹಿಳೆ ಬೇಸತ್ತು ಅಂಥ ಕೆಲಸ ಮಾಡಿದ್ದಾರೆ.

ಕಂಪನಿಯ ಕಿರುಕುಳಕ್ಕೆ ಬೇಸತ್ತು ಮಹಿಳೆ ಆತ್ಮಹತ್ಯೆಗೆ ಯತ್ನ ನಡೆಸಿದ್ದಾರೆ. ಮಹಿಳೆಯ ಕುಟುಂಬಸ್ಥರು ಹಾಗೂ‌ ಗ್ರಾಮಸ್ಥರಿಂದ ಕಂಪನಿಯ ಮುಂಭಾಗ ಪ್ರತಿಭಟನೆ ನಡೆದಿದೆ.

ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಮಯಸಂದ್ರದಲ್ಲಿ ಘಟನೆ ನಡೆದಿದೆ. ಮಯಸಂದ್ರ ಬಳಿ‌ ಇರುವ ಡಿಹೆಚ್ಎಲ್ ಕಂಪನಿಯಲ್ಲಿ ಕಳೆದ ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದ ರಾಚಮಾನಹಳ್ಳಿ ನಿವಾಸಿ ಉಷಾರಿಗೆ ಕಂಪನಿಯ ಮೇಲಾಧಿಕಾರಿಗಳು ಕಿರುಕುಳ ನೀಡುತ್ತಿದ್ದರು.

ರಾತ್ರಿ ಕೆಲಸ ಮುಗಿಸಿ ಮನೆಗೆ ಹೋದ ಮಹಿಳೆ ಉಷಾ ಕಿರುಕುಳ ನೀಡುತ್ತಿದ್ದ ಕಂಪನಿಯ ರಮೇಶ್, ಗಾಂಧಿ, ಪುಷ್ಪ, ನಾಗರಾಜು ಹಾಗು ಬಾಲರಾಜು ಎಂಬುವವರ ಹೆಸರುಗಳನ್ನು ಡೆತ್ ನೋಟ್ ನಲ್ಲಿ ಬರೆದು ನನಗೆ ಕೊಟ್ಟ ಕಷ್ಟವನ್ನು ಬೇರೆ ಯಾರಿಗೂ ಕೊಡಬೇಡಿ ಎಂದು ತಮ್ಮ ನೋವನ್ನು ಹಂಚಿಕೊಂಡು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಇದನ್ನು ನೋಡಿದ ಕುಟುಂಬದವರು ಆಕೆಯನ್ನು ರಕ್ಷಿಸಿ ಸ್ಥಳೀಯ ಖಾಸಗಿ‌ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಹಾಡಹಗಲಲ್ಲೇ ನಡೆಯಿತು ಅಂಥ ಕೃತ್ಯ