Select Your Language

Notifications

webdunia
webdunia
webdunia
webdunia

ದೇವರ ಪ್ರಸಾದ ತರದ ಗಂಡನೊಂದಿಗೆ ಜಗಳ: ಮಹಿಳೆ ಆತ್ಮಹತ್ಯೆ

ದೇವರ ಪ್ರಸಾದ ತರದ ಗಂಡನೊಂದಿಗೆ ಜಗಳ: ಮಹಿಳೆ ಆತ್ಮಹತ್ಯೆ
ಬೆಂಗಳೂರು , ಬುಧವಾರ, 23 ಮಾರ್ಚ್ 2022 (10:10 IST)
ಬೆಂಗಳೂರು: ಮಲೆ ಮಹದೇಶ್ವರ ಬೆಟ್ಟಕ್ಕೆ ಮಾದಪ್ಪನ ದರ್ಶನಕ್ಕೆ ಹೋಗಿದ್ದ ಗಂಡ ಬರುವಾಗ ಪ್ರಸಾದ ತರಲಿಲ್ಲವೆಂಬ ಕಾರಣಕ್ಕೆ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ನಡೆದಿದೆ.

27 ವರ್ಷದ ಗೃಹಿಣಿ ಶ್ವೇತಾ ಆತ್ಮಹತ್ಯೆ ಮಾಡಿಕೊಂಡಾಕೆ. ಗಂಡ ಮತ್ತು ಪುತ್ರ ಮಲೆಮಹದೇಶ್ವರ ಬೆಟ್ಟಕ್ಕೆ ಹೋಗಿದ್ದರು. ಆದರೆ ಬರುವಾಗ ಪ್ರಸಾದ ತರಲಿಲ್ಲವೆಂಬ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಜಗಳವೇ ನಡೆದಿತ್ತು.

ಇದೇ ಬೇಸರದಲ್ಲಿ ಶ್ವೇತಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೋವಿಡ್ ನಿರ್ವಹಣೆ : ಭಾರತ ಜಗತ್ತಿಗೆ ಮಾದರಿ