Select Your Language

Notifications

webdunia
webdunia
webdunia
webdunia

ಲಂಚ ಕೊಡದಿದ್ದಕ್ಕೆ ವಿಲ್ ಚೇರ್ ನಿರಾಕರಣೆ: ರೋಗಿಯನ್ನು ಹೊತ್ತುಕೊಂಡು ಕರೆತಂದರು!

ವಿಲ್ ಚೇರ್
ಚಿಕ್ಕಮಗಳೂರು , ಮಂಗಳವಾರ, 24 ಜುಲೈ 2018 (17:36 IST)
ಇಲ್ಲಿ ಲಂಚ ಕೊಡದಿದ್ದರೆ ವಿಲ್ ಚೇರ್ ಸಹ ಸಿಗುವುದಿಲ್ಲ. ಅನಾರೋಗ್ಯದಿಂದ ನರಳಾಡಿದ್ರೂ ಯಾರೂ ಕ್ಯಾರೇ ಎನ್ನುವುದಿಲ್ಲ. ಲಂಚ ಕೊಡದ ಕಾರಣಕ್ಕಾಗಿ ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯನ್ನು ಸಂಬಂಧಿಕರು ಡಾಕ್ಟರ್ ಬಳಿ ಎತ್ತುಕೊಂಡು ಬಂದ ಘಟನೆ ನಡೆದಿದೆ.

ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಅಮಾನವೀಯ ಘಟನೆ ನಡೆದಿದೆ. ಜಿಲ್ಲಾಸ್ಪತ್ರೆಗೆ ಬರುವ ಬಡ ರೋಗಿಗಳ ಪಾಡು ಹೇಳತೀರದಾಗಿದೆ. ಲಂಚ ಕೊಡಲು ನಿರಾಕರಿಸಿದಕ್ಕೆ ವಿಲ್ ಚೇರ್ ನೀಡದ ಆಸ್ಪತ್ರೆಯ ಸಿಬ್ಬಂದಿಗಳು ಅಮಾನವೀಯ ವರ್ತನೆ ತೋರಿದ್ದಾರೆ. ಹೀಗಾಗಿ ವಿಲ್ ಚೇರ್ ಖಾಲಿ ಇದ್ದರು ರೋಗಿಯನ್ನು ಆಕೆಯ ಸಂಬಂಧಿಕರು ಡಾಕ್ಟರ್ ಬಳಿ ಕರೆದುಕೊಂಡು ಬಂದಿದ್ದಾರೆ.

ಅಮಾನವೀಯ ಘಟನೆಯ ವಿಡಿಯೋ ಲಭ್ಯವಾಗಿದ್ದು, ವೈರಲ್ ಆಗುತ್ತಿದೆ. ರೋಗಿಗಳು ನರಳಾಡುತ್ತಿದ್ದರು ಸಹ ಕ್ಯಾರೆ ಅನ್ನದ ಆಸ್ಪತ್ರೆಯ ಸಿಬ್ಬಂದಿಗಳ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಗಂಡನ ಮನೆ ಬಿಟ್ಟು ಬಂದ ಮಗಳು: ಮಗಳು, ಪತ್ನಿ ಮೇಲೆ ಹಲ್ಲೆ ನಡೆಸಿದ ಪತಿ