Publish Date: Thu, 08 Mar 2018 (11:00 IST)
Updated Date: Thu, 08 Mar 2018 (11:03 IST)
ಬೆಂಗಳೂರು : ಕೆಪಿಜೆಪಿ ಪಕ್ಷದಿಂದ ಉಪೇಂದ್ರ ಅವರು ಹೊರಬಂದ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷದಲ್ಲಾದ ಬೆಳವಣಿಗೆಗಳ ಬಗ್ಗೆ ನಟ ಉಪೇಂದ್ರ ಅವರು ಟ್ವೀಟ್ ಮೂಲಕ ಮನವಿಯೊಂದನ್ನು ಮಾಡಿದ್ದಾರೆ.
ನಟ ಉಪೇಂದ್ರ ಅವರು ‘ನಮ್ಮ ಪ್ರಯಾಣದಲ್ಲಿ ಎಡವಿದಾಗ ಬೇಜಾರಾಗುವುದು ಸಹಜ. ಅದನ್ನು ಮರೆತು ಮುಂದೆ ಸಾಗುವುದೇ ಮನುಜ’ ಎಂದು ಟ್ವೀಟ್ ಮಾಡಿ ಕೆಪಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ಮಹೇಶ್ ಗೌಡ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಬೇಡಿ. ನಮ್ಮ ಪ್ರಜಾಕೀಯಕ್ಕೆ ಅದು ಶೋಭೆ ತರುವುದಿಲ್ಲ ಎಂದು ಅವರು ಟ್ವೀಟ್ ಮೂಲಕ ಜನರಲ್ಲಿ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ