Select Your Language

Notifications

webdunia
webdunia
webdunia
webdunia

ಮಂಜು ಪಾವಗಡ ಹೀಗೆ ಹೇಳಿದ್ದಾದ್ರು ಯಾಕೆ?

ದಿವ್ಯಾ ಸುರೇಶ್ ಜೊತೆ ಮೊದಲಿನಂತೆ ಇರೋಕೆ ಆಗೋಲ್ಲ ಎಂದ ಮಂಜು ಪಾವಗಡ: ಇದಕ್ಕೆ ಕಾರಣ ಶಮಂತ್ ಇರಬಹುದಾ..!

ಮಂಜು ಪಾವಗಡ ಹೀಗೆ ಹೇಳಿದ್ದಾದ್ರು ಯಾಕೆ?
Bangalore , ಗುರುವಾರ, 1 ಜುಲೈ 2021 (07:22 IST)
Bangalore:ಪ್ರಶಾಂತ್ ಅವರು ಆಡುತ್ತಿರುವ ಮಾತುಗಳಿಂದ ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್ ಅವರು ಕಣ್ಣೀರಿಟ್ಟಿದ್ದಾರೆ.






















 ಇನ್ನು ಹೊರಗಿನಿಂದ ಬಂದ ಮೇಲೆ ನೋಡಿರುವ ವಿಡಿಯೋ ಕ್ಲಿಪ್ಗಳಿಂದಾಗಿ ಈ ಸ್ನೇಹಿತರ ನಡುವೆ ಕೂದಲೆಳೆಯಷ್ಟು ಬಿರುಕು ಮೂಡಿತ್ತು. ಈಗ ಆ ಬಿರುಕು ದೊಡ್ಡದಾಗುವಂತೆ ಕಾಣುತ್ತಿದೆ.
 
ದಿವ್ಯಾ ಸುರೇಶ್ ಹಾಗೂ ಮಂಜು ಪಾವಗಡ ಮೊದಲ ಇನ್ನಿಂಗ್ಸ್ನಿಂದ ಒಳ್ಳೆಯ ಸ್ನೇಹಿತರು. ಇವರಿಬ್ಬರು ಸೇರಿ ಹಾಸ್ಯದ ಹೊಳೆ ಹರಿಸುತ್ತಾ ವೀಕ್ಷಕರನ್ನು ರಂಜಿಸಿದ್ದರು. ಆದರೆ ಅರ್ಧಕ್ಕೆ ಕಾರ್ಯಕ್ರಮ ರದ್ದುಗೊಂಡು ಮನೆಗಳಿಗೆ ಹೋಗಿದ್ದ ಬಿಗ್ ಬಾಸ್ 8ರ ಸ್ಪರ್ಧಿಗಳು ಸೆಕೆಂಡ್ ಇನ್ನಿಂಗ್ಸ್ನಲ್ಲಿ ಬಿಗ್ ಬಾಸ್ ಮನೆಗೆ ಮರಳಿದ್ದಾರೆ. ಈ ಸಲ ಮಂಜು ಹಾಗೂ ದಿವ್ಯಾ ಸುರೇಶ್ ಅವರು ಮೊದಲಿನಿಂತಿಲ್ಲ. ಕೇವಲ ಕಾರ್ಯಕ್ರಮಕ್ಕಾಗಿ ಮದುವೆ, ಹೆಂಡತಿ ಅಂತ ನಾಟಕ ಆಡುತ್ತಾ ರಂಜಿಸಿದ್ದ ಮಂಜು ಹಾಗೂ ದಿವ್ಯಾ ಸುರೇಶ್ ಈಗ ಕೊಂಚ ದೂರ ದೂರ ಇದ್ದಾರೆ. ಮಂಜು ಹಾಗೂ ದಿವ್ಯಾ ಸುರೇಶ್ ಮೊದಲಿನಂತೆ ಇಲ್ಲ. ಅದು ಇಬ್ಬರ ವರ್ತನೆಯಲ್ಲಿ ಎದ್ದಿ ಕಾಣುತ್ತಿದೆ. ಅದರಲ್ಲೂ ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ ಅವರು ಮಂಜು ಹಾಗೂ ದಿವ್ಯಾ ಸುರೇಶ್ ಅವರ ಬಗ್ಗೆ ಆಡುತ್ತಿರುವ ಮಾತುಗಳು ಈ ಇಬ್ಬರ ಮನಸ್ಸನ್ನೂ ಗಾಯಗೊಳಿಸಿದೆ.

ಪ್ರಶಾಂತ್ ಅವರು ಆಡುತ್ತಿರುವ ಮಾತುಗಳಿಂದ ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್ ಅವರು ಕಣ್ಣೀರಿಟ್ಟಿದ್ದಾರೆ. ಇನ್ನು ಹೊರಗಿನಿಂದ ಬಂದ ಮೇಲೆ ನೋಡಿರುವ ವಿಡಿಯೋ ಕ್ಲಿಪ್ಗಳಿಂದಾಗಿ ಈ ಸ್ನೇಹಿತರ ನಡುವೆ ಕೂದಲೆಳೆಯಷ್ಟು ಬಿರುಕು ಮೂಡಿತ್ತು. ಈಗ ಆ ಬಿರುಕು ದೊಡ್ಡದಾಗುವಂತೆ ಕಾಣುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಸ್ ಡಿ ಎ & ಎಫ್ ಡಿ ಎ ಪರೀಕ್ಷೆಗೆ ಮುಹೂರ್ತ ಫಿಕ್ಸ್